ನಿವೇಶನಕ್ಕಾಗಿ ಮಂಜೂರಾಗಿದ್ದ ಜಾಗದಲ್ಲಿ ಕಳೆದ 8 ವರ್ಷದಿಂದ ಫಲಾನುಭವಿಗಳ ಪಟ್ಟಿ ತಯಾರಿಸದೇ ಸತಾಯಿಸುತ್ತಿರುವುದನ್ನು ಖಂಡಿಸಿ ಮಾರ್ಚ್ 13ರಂದು ಮೂಡಿಗೆರೆ ತಾಲ್ಲೂಕಿನ ಹಳೇಮೂಡಿಗೆರೆ ಗ್ರಾ.ಪಂ. ಎದುರು ಅನಿರ್ಧಿಷ್ಟಾವಧಿ ಧರಣಿ ನಡೆಸಲಾಗುವುದು ಎಂದು ವಸತಿಗಾಗಿ ಹೋರಾಟ ವೇದಿಕೆ ಗೌರವಾಧ್ಯಕ್ಷ ಬಿ.ರುದ್ರಯ್ಯ ಹೇಳಿದರು.

ಅವರು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ವಸತಿಗಾಗಿ ಹೋರಾಟ ವೇದಿಕೆ ಮೂಲಕ ಕಳೆದ 15 ವರ್ಷದಿಂದ ನಿವೇಶನಕ್ಕಾಗಿ ಹೋರಾಟ ನಡೆಸಿಕೊಂಡು ಬರಲಾಗಿದೆ. ಕಳೆದ 8 ವರ್ಷದ ಹಿಂದೆ ಹಳೆಮೂಡಿಗೆರೆ ಗ್ರಾಮದ ಸರ್ವೆ ನಂಬರ್ 7ರಲ್ಲಿ 7.5 ಎಕರೆ ಪ್ರದೇಶ ಸರಕಾರಿ ಭೂಮಿಯನ್ನು ಸ್ವತಃ ತಾವೇ ಪತ್ತೆ ಮಾಡಿದ್ದು, ಅಲ್ಲಿ ಸುಮಾರು 30 ಕುಟುಂಬ ಗುಡಿಸಲು ನಿರ್ಮಿಸಿಕೊಂಡರು. ಆ ಭೂಮಿ ಕೆಲ ಪ್ರಬಾವಿಗಳು ತಮ್ಮದೆಂದು ತಕರಾರು ಮಾಡಿದ್ದು, ಗಲಭೆ ಸೃಷ್ಟಿಯಾಗಿತ್ತು. ನಂತರ ಸರ್ವ ನಡೆಸಿದಾಗ ಅದು ಸರಕಾರಿ ಭೂಮಿ ಎಂದು ಸ್ಪಷ್ಟವಾಯಿತು. ಈ ಹಿನ್ನಲೆಯಲ್ಲಿ 7.5 ಎಕರೆ ಪ್ರದೇಶದಲ್ಲಿ 4.30 ಎಕರೆ ಆಶ್ರಯ ನಿವೇಶನ, 1.5 ಎಕರೆ ಪೊಲೀಸ್ ವಸತಿ, 1.5 ಎಕರೆ ಹೆಣ್ಣು ಮಕ್ಕಳ ಹಾಸ್ಟೆಲ್ ಹಾಗೂ 1.5 ಎಕರೆ ಭೂಮಿ ಅಂಬೇಡ್ಕರ್ ಭವನಕ್ಕಾಗಿ ಮೀಸಲಿಡಲಾಯಿತು ಎಂದು ಹೇಳಿದರು.

ಅಲ್ಲಿಗೆ ರಸ್ತೆ ಸಮಸ್ಯೆ ಎದುರಾಗಿದ್ದರಿಂದ ರಸ್ತೆಗಾಗಿ ಪುನಃ ಅನೇಕ ಬಾರಿ ಹೋರಾಟ ಮಾಡಿದ್ದೇವೆ. ಆದರೆ 8 ವರ್ಷ ಕಳೆದರೂ ರಸ್ತೆ ಸಮಸ್ಯೆ ಬಗೆಹರಿಸಲಿಲ್ಲ. ಫಲಾನುಭವಿಗಳ ಪಟ್ಟಿ ಕೂಡ ತಯಾರಿಸಲಿಲ್ಲ. ಹಿಂದೆ ಇದ್ದ ಡಿಸಿ ಸತ್ಯವತಿ ಅವರು ಸ್ಥಳಕ್ಕೆ ಭೇಟಿ ನೀಡಿ, ಕೂಡಲೇ ರಸ್ತೆ ಸಮಸ್ಯೆ ಬಗಹರಿಸಿ, ಫಲಾನುಭವಿಗಳ ಪಟ್ಟಿ ತಯಾರಿಸಿ, ನಿವೇಶನ ಹಂಚಿಕೆ ಮಾಡಬೇಕೆಂದು ಎಸಿ ಮತ್ತು ತಹಸೀಲ್ದಾರರಿಗೆ ನಿರ್ದೇಶಿಸಿದ್ದರು. ನಂತರ ತಾಲೂಕಿನಲ್ಲಿ 3 ತಹಸೀಲ್ದಾರ್ ಬದಲಾದರು. ಆದರೆ ಇದೂವರೆಗೂ ರಸ್ತೆ ಸಮಸ್ಯೆ ಬಗೆಹರಿಯಲಿಲ್ಲ. ಫಲಾನುಭವಿಗಳ ಪಟ್ಟಿ ತಯಾರಿಸಲಿಲ್ಲ.

ಕಳೆದ 6 ತಿಂಗಳ ನಡೆದ ಗ್ರಾಮಸಭೆಯಲ್ಲಿ ಇನ್ನು 15 ದಿನದಲ್ಲಿ ಫಲಾನುಭವಿಗಳ ಆಯ್ಕೆ ಮಾಡುತ್ತೇವೆಂದು ಭರವಸೆ ನೀಡಿದ್ದು ಬಿಟ್ಟರೆ ಇದೂವರೆಗೂ ಕಾರ್ಯರೂಪಕ್ಕೆ ತರಲಿಲ್ಲ. ಹಾಗಾಗಿ ರಸ್ತೆ, ಕುಡಿಯುವ ನೀರಿನ ಪೂರೈಕೆ ಹಾಗೂ ಫಲಾನುಭವಿಗಳ ಪಟ್ಟಿ ತಯಾರಿಸಿ ಅರ್ಹರಿಗೆ ನಿವೇಶನ ಹಂಚಿಕೆ ಮಾಡುವವರೆಗೆ ಅನಿರ್ಧಿಷ್ಟಾವಧಿ ಧರಣಿ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಿದರು.

ಗೋಷ್ಠಿಯಲ್ಲಿ ಸಮಿತಿ ಕಾರ್ಯದರ್ಶಿ ಶಿವಪ್ಪ, ಆಯಿಷಾಭಾನು, ರಾಮು ಛತ್ರಮೈಧಾನ ಉಪಸ್ಥಿತರಿದ್ದರು.

 

Leave a Reply

Your email address will not be published. Required fields are marked *

ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ