
ಚಿಕ್ಕಮಗಳೂರು ತಾಲ್ಲೂಕಿನ ಇಂದಾವರ ಗ್ರಾಮದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷರಾಗಿ ಐ.ಎಸ್.ಯತೀಶ್ ಗೌಡ ಮತ್ತು ಉಪಾಧ್ಯಕ್ಷರಾಗಿ ಐ.ಸಿ.ಗುರುಸಿದ್ದೇಗೌಡ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಈ ವೇಳೆ ಅಭಿನಂದನೆ ಸಲ್ಲಿಸಿ ಮಾತನಾಡಿದ ಜಿಲ್ಲಾ ಒಕ್ಕಲಿಗರ ಸಂಘದ ಅಧ್ಯಕ್ಷ ಟಿ.ರಾಜಶೇಖರ್ ಗ್ರಾಮಸ್ಥರನ್ನು ಒಗ್ಗೂಡಿಸಿಕೊಂಡು ಎಲ್ಲರ ಕೆಲಸಗಳನ್ನು ಮಾಡುವುದು ಅಧ್ಯಕ್ಷರ ದೊಡ್ಡ ಜವಾಬ್ದಾರಿ. ಹಿರಿಯರು ಕಟ್ಟಿ ಬೆಳೆಸಿದ ಸಹಕಾರ ಸಂಘವನ್ನು ಪ್ರಾಮಾಣಿಕತೆಯಿಂದ ಸೇವೆ ಸಲ್ಲಿಸಿ ಅಭಿವೃದ್ಧಿಯತ್ತ ಕೊಂಡೊಯ್ಯಬೇಕು ಎಂ ದರು. ಸಹಕಾರ ಸಂಘದ ನೂತನ ಅಧ್ಯಕ್ಷ ಐ.ಸಿ.ಯತೀಶ್ ಮಾತನಾಡಿ ಇಂದಾವರ ಸೊಸೈಟಿ ಪುರಾತನ ಹಿನ್ನೆಲೆ ಹೊಂದಿರುವ ಸಂಘವಾಗಿದೆ ಎಂದರು.
ಈ ಸಂದರ್ಭದಲ್ಲಿ ಸಹಕಾರ ಸಂಘದ ನಿರ್ದೇಶಕಾದ ಐ.ಆರ್. ಗಜೇಂದ್ರ, ಐ.ಪಿ.ಪ್ರೇಮ್ ಕುಮಾರ ಐ.ಎಂ. ಮಂಜುನಾಥ್, ಐ.ಜೆ.ಮಲ್ಲೇಗೌಡ, ಐ.ಆರ್.ಕೆಂಚಯ್ಯ, ಐ.ಆರ್.ಮಂಜುನಾಥ್, ಐ.ಎಂ.ಸೋಮಶೇಖರ್, ಸಿ.ಎಂ. ವನಜಾಕ್ಷಿ, ನೀಲಾ, ಡಿಸಿಸಿ ಬ್ಯಾಂಕ್ ಮೇಲ್ವಿಚಾರಕ ಪವನ್ಕುಮಾರ್, ಮುಖಂಡರುಗಳಾದ ಬೀಕನಹಳ್ಳಿ ಸೋಮ ಶೇಖರ್, ಮುಗುಳುವಳ್ಳಿ ನಿರಂಜನ್, ಹೆಚ್.ಕೆ.ಕೇಶವಮೂರ್ತಿ, ಗ್ರಾಮಸ್ಥರಾದ ಸುರೇಶ್, ಸುಭಾಶ್, ದಿನೇಶ್, ರಾಜು, ರವಿ, ಲವಕುಮಾರ್, ರಿರ್ಟನಿಂಗ್ ಅಧಿಕಾರಿ ಶಂಕರೇಗೌಡ ಮತ್ತಿತರರು ಉಪಸ್ಥಿತರಿದ್ದರು.