ಪರಶುರಾಮ ಶಾಖೆ ಬಜರಂಗದಳ ಮೂಡಿಗೆರೆ ನಗರ ವತಿಯಿಂದ ಪಟ್ಟಣದ ಶ್ರೀ ಹಿರೇ ದೇವಿರಮ್ಮ ಹಾಗೂ ಶ್ರೀ ಅಯ್ಯಪ್ಪ ಸ್ವಾಮಿ ದೇವಾಲಯದಲ್ಲಿ ಸ್ವಚ್ಛತಾ ಕಾರ್ಯ ಮಾಡಲಾಯಿತು
ಈ ಸಂದರ್ಭದಲ್ಲಿ ಮೂಡಿಗೆರೆ ನಗರ ಸಂಯೋಜಕರು ಧನು. ತಾಲೂಕು ಗೋರಕ್ಷ ಪ್ರಮುಖ್ ಮನೋಜ್
ಕಸಬಾ ಸಂಯೋಜಕರು ಶಶಿ ಹಳೆ ಕೊಟೆ. ನಗರ ಸಪ್ತಹಿಕ್ ಮಿಲನ್ ಪ್ರಮುಖ್ ಸಾಗರ್ ಲೋಕವಳ್ಳಿ. ಯತೀಶ್. ಹೇಮಂತ್ ಹಾಗೂ ಇನ್ನಿತರ ಕಾರ್ಯಕರ್ತರು ಇದ್ದರು.
ಕಾರ್ಯಕರ್ತರು ದೇವಾಲಯ ಆವರಣದಲ್ಲಿ ಬೆಳೆದಿದ್ದ ಕಳೆಯನ್ನು ಯಂತ್ರದ ಮೂಲಕ ಕೊಚ್ಚಿದರು, ಕಸಕಡ್ಡಿಗಳನ್ನು ಹೆಕ್ಕಿ, ಹಾವಸೆಯನ್ನು ತೆಗೆದು ಸ್ವಚ್ಚಗೊಳಿಸಿದರು. ಕಾರ್ಯಕರ್ತರ ಸೇವಾ ಕಾರ್ಯಕ್ಕೆ ಸಾರ್ವಜನಿಕರು, ಭಕ್ತಾಧಿಗಳು ಮೆಚ್ಚುಗೆ ವ್ತಕ್ತಪಡಿಸಿದ್ದಾರೆ.



