ಶಾಲೆಯ ರಜೆ ಸಂದರ್ಭದಲ್ಲಿ ಮಕ್ಕಳು ಒಟ್ಟಾಗಿ ಈಜಲು ಹೋದಾಗ ಈ ಘಟನೆ ನಡೆದಿದೆ.
ಮುತ್ತಿಗೆ ಗ್ರಾಮದ ಜೀವನ್ (13 ವ), ಸಾತ್ವಿಕ್ (11 ವ), ವಿಶ್ವ ಹಾಗೂ ಪೃಥ್ವಿ (12 ವ) ಮೃತ ಬಾಲಕರು. ಚಿರಾಗ್ (10 ವ) ಬದುಕುಳಿದಿದ್ದು ಅವನನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.
ಸ್ಥಳಕ್ಕೆ ಅಗ್ನಿಶಾಮಕ ದಳ ಆಗಮಿಸಿ ನಾಲ್ಕು ಮಕ್ಕಳ ಶವವನ್ನು ಹೊರ ತೆಗೆಯಲು ಮುಂದಾಗಿದ್ದಾರೆ.
ಈ ದುರ್ಘಟನೆಯಿಂದ ಇಡೀ ಗ್ರಾಮವೇ ಶೋಕಸಾಗರದಲ್ಲಿ ಮುಳುಗಿದೆ. ಪೋಷಕರ ಆಕ್ರಂದನ ಹೇಳತೀರದಾಗಿದೆ.