ಭಾರತದ ಮಾಜಿ ಪ್ರಧಾನಿ ಡಾ. ಮನಮೋಹನ್ ಸಿಂಗ್ ಮತ್ತು ಜಮ್ಮು ಕಾಶ್ಮೀರದ ಮಿಲಿಟರಿ ಟ್ರಕ್ ಅಪಘಾತದಲ್ಲಿ ಹುತಾತ್ಮರಾದ ಐದು ಜನ ಯೋಧರಿಗೆ ಸೇವಾಭಾರತಿ ಸಮಾಜ ಸೇವಾ ಸಂಘ ಭಾರತೀಭೈಲು ಸಂಘದ ವತಿಯಿಂದ ಮೌನಾಚಾರಣೆಯ ಮೂಲಕ ಶ್ರದ್ಧಾಂಜಲಿ ಸಲ್ಲಿಸಲಾಯಿತು.
ಈ ಕಾರ್ಯಕ್ರಮದಲ್ಲಿ ಅಧ್ಯಕ್ಷರಾದ ಬಿ ಎನ್ ಶಶಿಧರ್ ಮಾತನಾಡಿ ಡಾ. ಮನಮೋಹನ್ ಸಿಂಗ್ ದೇಶದ ಪ್ರಧಾನಿಯಾಗಿ, ಹಣಕಾಸು ಸಚಿವರಾಗಿ ಸುದೀರ್ಘ ಸೇವೆ ಸಲ್ಲಿಸಿದ್ದರು. ದೇಶದ ಆರ್ಥಿಕತೆಗೆ ಉತ್ತಮ ಮಾರ್ಗದರ್ಶನ ಮಾಡಿದ್ದರು.
ಜಮ್ಮು ಕಾಶ್ಮೀರದಲ್ಲಿ ನಡೆದ ಸೇವಾ ವಾಹನ ಅಪಘಾತದಲ್ಲಿ ನಮ್ಮ ರಾಜ್ಯ ನಾಲ್ಕು ಮಂದಿ ಯೋದರು ಸೇರಿ 6 ಜನರು ಸಾವನ್ನಪ್ಪಿರುವುದು ಅತ್ಯಂತ ನೋವಿನ ಸಂಗತಿಯಾಗಿದೆ. ಅವರ ಸೇವೆ ಅವಿಸ್ಮರಣೀಯ ಎಂದರು.
ಮಾಜಿ ಗ್ರಾಮಪಂಚಾಯತಿ ಅಧ್ಯಕ್ಷರು ಎಚ್ ಬಿ ರವಿಗೌಡ ಹಾಗೂ ಮಾಜಿ ಗ್ರಾಮಪಂಚಾಯತಿ ಅಧ್ಯಕ್ಷರು ರಥೀಶ್ ಗೌಡ ಹಾಗೂ ಸಂಘದ ಸರ್ವ ಸದಸ್ಯರು ಹಾಗೂ ಬಿ ಹೊಸಹಳ್ಳಿ ಗ್ರಾಮಸ್ಥರು ಭಾಗವಹಿಸಿದರು.



