ಮೂಡಿಗೆರೆ ತಾಲೂಕಿನ ಬಣಕಲ್ ಪ್ರೌಢಶಾಲೆಯಲ್ಲಿ ಓದಿದ 2009-2010 ಬ್ಯಾಚ್ ನ ಹಳೆಯ ವಿದ್ಯಾರ್ಥಿಗಳಿಂದ ಬಣಕಲ್ ಪ್ರೌಢಶಾಲೆಯಲ್ಲಿ ಗುರು ವಂದನ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.
ಎಲ್ಲಾ ಶಿಕ್ಷಕರನ್ನು ಹಳೆಯ ವಿದ್ಯಾರ್ಥಿಗಳು ಸನ್ಮಾನಿಸಿ ಅವರಿಗೆ ನೆನಪಿನ ಕಾಣಿಕೆಯನ್ನು ಕೊಟ್ಟು ಗೌರವಿಸಿದರು.

ನಂತರ ವಿದ್ಯಾರ್ಥಿಗಳು ಎಲ್ಲರೂ ಸೇರಿ ಪ್ರವಾಸಿ ಸ್ಥಳವಾದ ದೇವರಮನೆಗೆ ತೆರಳಿ ಅಲ್ಲಿಯ ಸುತ್ತಮುತ್ತ ಸ್ವಚ್ಛತೆಯ ಬಗ್ಗೆ ಅರಿವು ಮೂಡಿಸುವ ನಿಟ್ಟಿನಲ್ಲಿ ವಿದ್ಯಾರ್ಥಿಗಳು ಸ್ವಚ್ಛತಾ ಅಭಿಯಾನ ನಡೆಸುವ ಮೂಲಕ ಸ್ವಚ್ಚ ಗೊಳಿಸಿದರು.
ಹಳೆ ವಿದ್ಯಾರ್ಥಿಗಳಾದ, ರಜತ್ ಬಾಳೂರು, ಸಾಜೀದ್, ಪೂರ್ಣೇಶ್ ಹೆಬ್ರಿಗೆ, ಸನ್ಮತಿ, ಉಲ್ಲಾಸ, ನುಸೈಬ, ರಮ್ಸೀನಾ, ಅಬ್ದುಲ್ಲ, ಅನಿಲ್, ಪ್ರಮೋದ್, ಮುನೀರ್, ರಶೀದ್, ಅಜ್ಮನ್, ಅಶ್ವಿತ್, ಸಂತೋಷ್, ಚಂದ್ರಶೇಖರ, ಹಾಗೂ ಬಣಕಲ್ ಪ್ರೌಢ ಶಾಲೆಯ ಮುಖ್ಯ ಶಿಕ್ಷಕರು ಹಾಗೂ ಶಿಕ್ಷಕರು ವಿದ್ಯಾರ್ಥಿಗಳು ಇದ್ದರು.




