ಮೂಡಿಗೆರೆ ಜೆಎಂಎಫ್ಸಿ ನ್ಯಾಯಾಲಯದಲ್ಲಿ ಕರ್ತವ್ಯ ನಿರ್ವಹಿಸಿ ವರ್ಗಾವಣೆಗೊಂಡ ಹಿರಿಯ ಸಿವಿಲ್ ನ್ಯಾಯಾಧೀಶ ವಿ.ಜಯಪ್ರಕಾಶ್ ಅವರಿಗೆ ವಕೀಲರ ಸಂಘದ ವತಿಯಿಂದ ಮಂಗಳವಾರ ಬೀಳ್ಕೊಡುಗೆ ಸಮಾರಂಭ ನಡೆಯಿತು.
ಸಮಾರಂಭದಲ್ಲಿ ನ್ಯಾಯಾಧೀಶ ವಿ.ಜಯಪ್ರಕಾಶ್ ಗೌರವ ಸ್ವೀಕರಿಸಿ ಮಾತನಾಡಿ, ವರ್ಗಾವಣೆ ಎಂಬುದು ಸಹಜ ಪ್ರಕ್ರಿಯೆ. ಅದನ್ನು ಸ್ವೀಕರಿಸಿ ಮುನ್ನಡೆಯಲೇಬೇಕು. ಇಲ್ಲಿನ ನ್ಯಾಯಾಂಗ ಸೇವಾ ಅನುಭವಗಳು ಮತ್ತು ವಕೀಲರೊಂದಿಗೆ ಬೆಸೆದುಕೊಂಡ ಸ್ನೇಹಪೂರ್ಣ ಸಂಬಂಧ ಎಂದಿಗೂ ಮರೆಯಲು ಸಾಧ್ಯವಿಲ್ಲವೆಂದು ಹೇಳಿದರು.
ವಕೀಲರ ಸಂಘದ ಅಧ್ಯಕ್ಷ ಎಚ್.ಕೆ.ದೇವರಾಜ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, ನ್ಯಾಯಾಲಯ ಮತ್ತು ವಕೀಲರ ನಡುವೆ ಇರುವ ಪರಸ್ಪರ ಗೌರವ, ಸಹಕಾರ ಮತ್ತು ವಿಶ್ವಾಸದ ಸಂಬಂಧ ಸದಾ ಬಲವಾಗಿ ಮುಂದುವರಿಯಲಿ ಎಂದು ಆಶಿಸಿದರು.
ಪ್ರಧಾನ ಸಿವಿಲ್ ನ್ಯಾಯಾಧೀಶ ಎ.ವಿಶ್ವನಾಥ್, ಹೆಚ್ಚುವರಿ ಸಿವಿಲ್ ನ್ಯಾಯಾಧೀಶೆ ಕೆ.ಕೆ.ಸುರಕ್ಷಾ, ಸಹಾಯಕ ಸರಕಾರಿ ಅಭಿಯೋಜಕರಾದ ರೂಪ, ರೇಣುಕ, ವಕೀಲರ ಸಂಘದ ಪ್ರಧಾನ ಕಾರ್ಯದರ್ಶಿ ಎಂ.ಎಂ.ರಾಘವೇಂದ್ರ, ವಕೀಲರಾದ ಕೆ.ಎಂ.ಪ್ರಶಾಂತ್, ಬಿ.ಜಗದೀಶ್, ಎಂ.ವಿ.ಜಯರಾಜ್, ಡಿ.ಕೆ.ಪ್ರಸನ್ನ, ಬಿ.ಟಿ.ನಟರಾಜ್, ಎಚ್.ಕೆ.ರಘು, ಬಿ.ಎ.ಸುರೇಶ್, ಹರ್ಷನಾಥ್, ಸುಧೀಪ್, ಕೆ.ಸಿ. ಚಂದ್ರಶೇಖರ್, ರಿಯಾ ಮತ್ತಿತರರಿದ್ದರು.



