ಮೂಡಿಗೆರೆ ತಾಲೂಕಿನ ಕಮ್ಮರಗೋಡು ಗ್ರಾಮದ ಕೃಷಿ ಹೊಂಡವೊಂದರಲ್ಲಿ ಕಾಡಾನೆ ಮರಿ ಇಳಿದು ಒಂದು ಗಂಟೆಗೂ ಹೆಚ್ಚು ಕಾಲ ನೀರಿನಲ್ಲಿ ಈಜಾಡುತ್ತಾ ಆಟವಾಡಿದ ಘಟನೆ ಭಾನುವಾರ ಬೆಳಿಗ್ಗೆ ನಡೆದಿದೆ.
ತೋಟದಲ್ಲಿ ಸ್ಪಿಂಕ್ಲರ್ ಫೈಬರ್ ಪೈಪ್ ಒಂದನ್ನು ಕೆರೆಗೆ ಹಾಕಿ ಅದರೊಂದಿಗೆ ಆಡವಾಡುತ್ತಿದ್ದ ದೃಶ್ಯ ನೋಡುಗರ ಮೊಬೈಲ್ ನಲ್ಲಿ ಸೆರೆಯಾಗಿದೆ.
ಸ್ಥಳಕ್ಕೆ ಅರಣ್ಯ ಇಲಾಖೆ ಅಧಿಕಾರಿಗಳು ತಕ್ಷಣ ಭೇಟಿ ನೀಡಿ, ಜನರನ್ನು ದೂರವಿರಿಸಿ ನಂತರ ಕಾಡಾನೆಯನ್ನು ಹತ್ತಿರದ ಕಾಡಿನತ್ತ ಅಟ್ಟಿದ್ದಾರೆ.
ಈ ಭಾಗದಲ್ಲಿ ಕಾಡಾನೆಗಳ ಗುಂಪೊಂದು ಸೇರಿಕೊಂಡು ಕೃಷಿ ಜಮೀನುಗಳಿಗೆ ಲಗ್ಗೆ ಇಡುತ್ತಿದ್ದ, ರೈತರ ಕಾಫಿ, ಅಡಿಕೆ, ಬಾಳೆ ಗಿಡಗಳನ್ನು ನಾಶಪಡಿಸುತ್ತಿರುವುದರ ಜೊತೆಗೆ ತೋಟದ ಕೆರೆಗಳಿಗೆ ಇಳಿದು ಕೆರೆಗಳಿಗೆ ಹಾನಿಯುಂಟುಮಾಡುತ್ತಿವೆ.



