ಚಿಕ್ಕಮಗಳೂರು ಪ್ರೆಸ್ ಕ್ಲಬ್ ನೂತನ ಅಧ್ಯಕ್ಷರಾಗಿ ಸಿ.ಡಿ.ಚಂದ್ರೇಗೌಡ ಆಯ್ಕೆಯಾದರು. ನಗರದ ಜಿಲ್ಲಾ ಆಟದ ಮೈದಾನದಲ್ಲಿರುವ ಪ್ರೆಸ್ಕ್ಲಬ್ನಲ್ಲಿ ಚುನಾ ವಣೆ ಪ್ರಕ್ರಿಯೆ ನಡೆಯಿತು. ಕಣದಲ್ಲಿದ್ದ 25 ಸದಸ್ಯರಲ್ಲಿ 13 ಜನರು ನಿರ್ದೇಶಕರಾಗಿ ಆಯ್ಕೆಯಾದರು.
ಬಳಿಕ ನಡೆದ ಅಧ್ಯಕ್ಷ ಸ್ಥಾನದ ಚುನಾವಣೆಗೆ ಉಮೇಶ್ ಕುಮಾರ್, ಸಿ.ಡಿ. ಚಂದ್ರೇಗೌಡ, ಮಹಾ ರುದ್ರ ಕಣದಲ್ಲಿ ದ್ದರು. ಅಂತಿಮವಾಗಿ 8 ಮತ ಪಡೆಯುವ ಮೂಲಕ ಸಿ.ಡಿ.ಚಂದ್ರೇಗೌಡ ಆಯ್ಕೆಯಾದರು. ಎ.ಎನ್.ಮೂರ್ತಿ, ಎನ್.ಪ್ರವೀಣ್ (ಉಪಾಧ್ಯಕ್ಷರು), ಎನ್.ಕೆ.ಗೋಪಿ (ಪ್ರಧಾನ ಕಾರ್ಯದರ್ಶಿ), ಪುನೀತ್ (ಖಜಾಂಚಿ) ಕೆ.ಎಸ್.ಕಿಶೋರ್ ಕುಮಾರ್ ,ಕೆ.ಎಚ್.ರುದ್ರಯ್ಯ (ಸಹ ಕಾರ್ಯದರ್ಶಿ) ಯಾಗಿ ಆಯ್ಕೆಯಾದರು.
ನಿರ್ದೇಶಕರಾಗಿ ಯು.ಪವನ್ ಕುಮಾರ್ , ಎಚ್.ಡಿ. ಶ್ರೀಕಾಂತ್, ಕೆ.ಜಯಕುಮಾರ್, ಸಿ.ಸುರೇಶ್, ಎಂ.ಎಸ್.ಉಮೇಶ್, ಮಹಾರುದ್ರ ಆಯ್ಕೆಯಾದರು. ಚುನಾವಣಾಧಿಕಾರಿಯಾಗಿ ನೋಟರಿ ವಿ.ಕೆ.ರಘು, ಸಹಾಯಕ ಚುನಾವಣಾಧಿ ಕಾರಿಯಾಗಿ ನಿವೃತ್ತ ಪೊಲೀಸ್ ಅಧಿಕಾರಿ ಸೋಮಶೇಖರ್ ಚುನಾವಣಾ ಪ್ರಕ್ರಿಯೆ ನಡೆಸಿಕೊಟ್ಟರು.



