ಕೆಪಿಎಸ್ ಕಳಸ ಶಾಲೆಯಲ್ಲಿ ಎಸ್.ಡಿ.ಎಂ.ಸಿ ಕಾರ್ಯಾಧ್ಯಕ್ಷರಾದ ಮಹಮದ್ ರಫೀಕ್ ರವರ ಅಧ್ಯಕ್ಷತೆಯಲ್ಲಿ ಕರೆಯಲಾಗಿದ್ದ ಕೆಪಿಎಸ್ ಹಿರಿಯ ವಿದ್ಯಾರ್ಥಿಗಳ ಸಂಘದ ಸಭೆಯಲ್ಲಿ ಹಿರಿಯ ವಿದ್ಯಾರ್ಥಿಗಳ ಸಂಘದ ಸ್ಥಾಪಕ ಅಧ್ಯಕ್ಷರಾಗಿ ಸುಧೀರ್ ಅಬ್ಬುಗುಡಿಗೆ ಆಯ್ಕೆಯಾಗಿದ್ದಾರೆ.
ಈ ಹಿಂದೆ ತಾತ್ಕಾಲಿಕವಾಗಿ ರಚಿತವಾಗಿದ್ದ ಹಿರಿಯ ವಿದ್ಯಾರ್ಥಿಗಳ ಸಂಘದಲ್ಲಿ ಉಪಾಧ್ಯಕ್ಷರಾಗಿದ್ದ ಸುಧೀರ್, ಸರ್ವಸದಸ್ಯರ ಸಹಮತದಿಂದ ಅಧ್ಯಕ್ಷರನ್ನಾಗಿ ಆಯ್ಕೆ ಮಾಡಲಾಯಿತು.

ಉಪಾಧ್ಯಕ್ಷರಾಗಿ ವಕೀಲರಾದ ವೆಂಕಟೇಶ್ ಜಿ.ಬಿ.
ಖಜಾಂಚಿಯಾಗಿ ವಕೀಲರಾದ ಅಶೋಕ್.ಟಿ
ಕಾರ್ಯದರ್ಶಿಯಾಗಿ ಕಾಲೇಜಿನ ಪ್ರಾಂಶುಪಾಲರಾದ ಅನಂತ ಪದ್ಮನಾಭ್ ಹಾಗೂ ಸಂಘದ ಇನ್ನಿತರೆ ಪದಾಧಿಕಾರಿಗಳಾಗಿ ಸುಮನಾಜಯರಾಜ್, ಉಮಾವಿನಯ್, ಜ್ಯೋತಿ ರಾಜೇಶ್, ಶಿವು ಕಾರಗದ್ದೆ, ಗಣೇಶ್, ನಂದನ್, ಇತರರು ಆಯ್ಕೆಯಾಗಿದ್ದಾರೆ.
ಕೆಪಿಎಸ್ ಪ್ರಾಂಶುಪಾಲರಾದ ಅನಂತ ಪದ್ಮನಾಭ, ಶಿಕ್ಷಕರಾದ ಶಿವಕುಮಾರ್ , ಶೃಂಗೇಶ್ವರ್, ಸತೀಶ್ ಲೋಕೇಶ್, ಮಲ್ಲಿಕಾರ್ಜುನ್, ಎಸ್ ಡಿ ಎಂ ಸಿ ಉಪಾಧ್ಯಕ್ಷರಾದ ವಸಂತ್, ಸದಸ್ಯರಾದ ವೀರೇಂದ್ರ, ರವಿಚಂದ್ರ, ಗಣೇಶ್ ಭಟ್, ಅರುಣ್ ಕುಮಾರ್ ಹಾಗೂ ಹಿರಿಯ ವಿದ್ಯಾರ್ಥಿಗಳಾದ ಉದಯ್, ಮಹೇಶ್ ಕೆ.ಸಿ, ಶಿವು ಕಾರಗದ್ದೆ, ಪ್ರಸನ್ನ , ತನ್ವೀರ್, ಇನ್ನಿತರರು ಉಪಸ್ಥಿತರಿದ್ದರು.

“ನನ್ನ ಶಾಲೆ ನನ್ನ ಕೊಡುಗೆ” ಎಂಬ ಧ್ಯೇಯದೊಂದಿಗೆ ಶಾಲೆಯ ಸರ್ವತೋಮುಖ ಅಭಿವೃದ್ಧಿಗೆ ಎಲ್ಲಾ ಹಿರಿಯ ವಿದ್ಯಾರ್ಥಿಗಳನ್ನು ಸಮ್ಮಿಲನಗೊಳಿಸುವ ಚರ್ಚಿಸಲಾಯಿತು.
ಶಿಕ್ಷಕರಾದ ಶಿವಕುಮಾರ್ ಸಭೆ ನಿರ್ವಹಿಸಿದರು.



