ಮೂಡಿಗೆರೆ ತಾಲೂಕು ಛಾಯಾಗ್ರಾಹಕರ ಸಂಘದ ಹೊಸ ಕಾರ್ಯಕಾರಿ ಸಮಿತಿ ರಚನೆಯಾಗಿದ್ದು, ಸುನಿಲ್ ಎಂ.ಎಲ್ ಅವರನ್ನು ಸಂಘದ ಅಧ್ಯಕ್ಷರಾಗಿ ಆಯ್ಕೆ ಮಾಡಲಾಗಿದೆ. ಛಾಯಾಗ್ರಹಣ ಕ್ಷೇತ್ರದಲ್ಲಿ ಹಲವು ವರ್ಷಗಳ ಅನುಭವ ಹೊಂದಿರುವ ಅವರು ಸಂಘದ ಅಭಿವೃದ್ಧಿಗೆ ತಾವು ಬದ್ಧರಾಗಿರುವುದಾಗಿ ತಿಳಿಸಿದ್ದಾರೆ.

ಹೊಸ ಕಾರ್ಯಕಾರಿ ಸಮಿತಿ ಹೀಗಿದೆ:
ಅಧ್ಯಕ್ಷರು: ಸುನಿಲ್ ಎಂ.ಎಲ್
ಕಾರ್ಯದಕ್ಷರು: ದೀಪನ್
ಉಪಾಧ್ಯಕ್ಷರು: ಮನೋಜ್ ಕುಮಾರ್
ಕಾರ್ಯದರ್ಶಿ: ದಿಲೀಪ್ ಶೆಟ್ಟಿ (ಡಿ.ಎಂ ಸ್ಟುಡಿಯೋ)
ಸಹಕಾರ್ಯದರ್ಶಿ: ಪ್ರವೀಣ್ (ಬಾಲೆ)
ಖಜಾಂಜಿ: ಸಮೃದ್ಧ ಬಣಕಲ್
ಈ ಸಂದರ್ಭದಲ್ಲಿ ಸಂಘದ ಮಾಜಿ ಅಧ್ಯಕ್ಷರಾದ. ವಸಂತ ಪೂಜಾರಿ. ಸತ್ಯನಾರಾಯಣ ಶೆಟ್ಟಿ. ಪರಮೇಶ್. ಸದಸ್ಯರಾದ. ವಸಂತ್ ಪೈ. ಮಂಜು. ನಿರಂಜನ್ . ಪುನೀತ್ ಮೊದಲಾದವರು ಹೊಸದಾಗಿ ಆಯ್ಕೆಯಾದ ತಂಡಕ್ಕೆ ಶುಭಹಾರೈಕೆ ಸಲ್ಲಿಸಿದ್ದು, ಛಾಯಾಗ್ರಾಹಕರ ಹಿತಾಸಕ್ತಿ ಹಾಗೂ ತಾಂತ್ರಿಕ ಪ್ರಗಶೀಲತೆಗೆ ಗಮನ ಹರಿಸುವ ನಿರೀಕ್ಷೆ ವ್ಯಕ್ತಪಡಿಸಿದ್ದಾರೆ.



