ಮೂಡಿಗೆರೆ ಪಟ್ಟಣದ ಜೆಡಿಎಸ್ ಕಚೇರಿಯಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ಅವರ 135ನೇ ಜನ್ಮ ದಿನಾಚರಣೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.
ಕಾರ್ಯಕ್ರಮದಲ್ಲಿ ಮಾತನಾಡಿದ ಪಕ್ಷದ ಮುಖಂಡರುಗಳು ಭಾರತ ದೇಶದ ಬೆಳವಣಿಗೆಗೆ ಅಂಬೇಡ್ಕರ್ ಅವರ ಕೊಡುಗೆಯನ್ನು ಸ್ಮರಿಸಿದರು. ಅವರ ಆಶಯಗಳನ್ನು ಇಂದಿನ ಪೀಳಿಗೆ ಮೈಗೂಡಿಸಿಕೊಳ್ಳ ಬೇಕೆಂದು ಕರೆ ನೀಡಿದರು.
ಈ ಸಂದರ್ಭದಲ್ಲಿ ಮುಖಂಡರಾದ ಡಿ.ಬಿ.ಅಶೋಕ್, ಎಂ.ಸಿ.ಹೂವಪ್ಪ, ರಾಜೇಂದ್ರ ಕಣಚೂರು, ನಿಡುವಾಳೆ ಚಂದ್ರು, ಸುರೇಂದ್ರ ಹ್ಯಾರಗುಡ್ಡೆ, ರವಿ ಮಗ್ಗಲಮಕ್ಕಿ, ಪ್ರಸನ್ನ ಗೌತಹಳ್ಳಿ, ಮನೋಹರ್ ಗೌಡಹಳ್ಳಿ, ಮಂಜುನಾಥ್ ಬೆಟ್ಟಗೆರೆ, ಧರ್ಮೇಶ್ ಹಂಡುಗುಳಿ, ಮಂಜುನಾಥ್ ಮಡ್ಡಿಕೆರೆ ಮತ್ತಿತರರಿದ್ದರು.



