Leed suddi

 

 

ಮನೆಗೆ ಮಾತ್ರ ಸೀಮಿತವಾಗಿದ್ದ ತಾಯಂದಿರು ಇಂದು ಮನೆಯಿಂದ ಹೊರ  ಬಂದು ಈ ಸಮಾಜವನ್ನು ಹೇಗೆ ಕಟ್ಟಬಹುದು ಎಂದು ತೋರಿಸಿದ್ದಾರೆ. ತಾಯಂದಿರು ಇಲ್ಲದೇ ಇದ್ದರೇ ಮನುಕುಲಕ್ಕೆ ಬದುಕಿಲ್ಲ ಎಂದು ಜಗದ್ಗುರು ನಿರ್ಮಲಾನಂದ ಸ್ವಾಮೀಜಿ ಹೇಳಿದರು.

ಚಿಕ್ಕಮಗಳೂರು ಬೈಪಾಸ್ ರಸ್ತೆಯಲ್ಲಿ ನೂತನವಾಗಿ ನಿರ್ಮಿಸಿರುವ ಜಿಲ್ಲಾ ಒಕ್ಕಲಿಗರ ಮಹಿಳಾ ಭವನದ ಕಟ್ಟಡ ಉದ್ಘಾಟನಾ ನೆರವೇರಿಸಿ  ನಂತರ ವಿಜಯಪುರದ ಜಿಲ್ಲಾ ಒಕ್ಕಲಿಗರ ಸಮುದಾಯ ಭವನದಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಆ ಸೇವಾ ಕಾರ್ಯಕ್ಕೆ ಸಂಭ್ರಮಾಚರಣೆ ಮಾಡಲಾಗುತ್ತಿದೆ. ಜೊತೆಗೆ ಎಲ್ಲಾ ಕೊಡುಗೈದಾನಿಗಳಗೆ ಕೃತಜ್ಞತೆ ಸಲ್ಲಿಸಲು ಈ ಕಾರ್ಯಕ್ರಮ ಮಾಡಲಾಗುತ್ತಿದೆ. ನಮ್ಮ ದೇಶದಲ್ಲಿ ತಾಯಂದಿಗೆ ದೇವತಾ ಸ್ಥಾನವನ್ನು ನೀಡಲಾಗಿದೆ ಎಂದು ಹೇಳಿದರು.

ಈ ರೀತಿಯ ಸಂಘ ಸಂಸ್ಥೆಗಳನ್ನು ಕಟ್ಟಿಕೊಂಡು ಮಾಡಬೇಕಾದ ಕಾರ್ಯ ಅಂದರೆ ಅದು ಸೇವಾ ಮಾರ್ಗ, ಸೇವೆಯ ಭಾಗವಾಗಿ ಸಂಘವನ್ನು ಕಟ್ಟಿ ಅದನ್ನು ಮುನ್ನಡೆಸುವ ಶಕ್ತಿ ಈ ಒಕ್ಕಲಿಗ ಸಮುದಾಯದ ತಾಯಂದಿರಲ್ಲಿದೆ. ತಾಯಂದಿರಿಗೆ ಎಲ್ಲಾ ಕಾರ್ಯಮಾಡುವ ಶಕ್ತಿ ಇದೆ ಎಂದು ಹೇಳಿದರು.

ಶಾಸಕ ಎಚ್.ಡಿ ತಮ್ಮಯ್ಯ ಮಾತನಾಡಿ, ಯಾವುದೇ ಒಬ್ಬ ಪುರುಷ ಶಿಕ್ಷಣ ಕಲಿತರೇ ಆ ವ್ಯಕ್ತಿ ಮಾತ್ರ ಶಿಕ್ಷಣ ಕಲಿತಂತೆ. ಆದರೆ ಮಹಿಳೆ ಶಿಕ್ಷಣ ಪಡೆದರೆ ಆಗ ಒಂದು ಶಾಲೆಯನ್ನೇ ತೆರೆದಂತೆ. ಮಹಿಳೆಯರು ಪ್ರತಿ ಪುರುಷನ ಆಧಾರ ಸ್ಥಂಭವಾಗಿರುತ್ತಾರೆ. ಅವರ ಶಕ್ತಿ ಮತ್ತು ಸಾಮರ್ಥ್ಯ ಸಮಾಜದ ಅಭಿವೃದ್ಧಿಗೆ ಮಹತ್ವದಾಗಿದೆ ಎಂದು ಹೇಳಿದರು.

ಒಕ್ಕಲಿಗ ಸಮುದಾಯ ಅತಿ ಹೆಚ್ಚು ಕೃಷಿಗೆ ಒತ್ತು ಕೊಡುವ ಸಮುದಾಯ. ಕೃಷಿ ಜೊತೆಗೆ ಸಾಮಾಜಿಕ, ಸಾಂಸ್ಕೃತಿಕ, ಶಿಕ್ಷಣಕ್ಕೆ ಸದಾ ಮುಂಚೂಣಿಯಲ್ಲಿದೆ. ಒಕ್ಕಲಿಗ ಸಮುದಾಯದ ಮಹಿಳೆಯರು ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮೂಲಕ ಸಮಾಜಕ್ಕೆ ಮಾದರಿಯಾಗಿದ್ದಾರೆ ಎಂದು ಮೆಚ್ಚುಗೆ ವ್ಯಕ್ತ ಪಡಿಸಿದರು.

ಮಹಿಳೆಯರ ಅಭಿವೃದ್ಧಿಗಾಗಿ ಈ ಸಮಾಜ ಮಹಿಳಾ ಭವನವನ್ನು ನಿರ್ಮಾಣ ಮಾಡಿರುವುದು ಹೆಮ್ಮೆಯ ಸಂಕೇತವಾಗಿದೆ. ಈ ಮಹಿಳಾ ಭವನ ವಿವಿಧ ಕಾರ್ಯಕ್ರಮಕ್ಕೆ, ಸ್ವ ಉದ್ಯೋಗ, ಸಾಂಸ್ಕೃತಿಕ ಚಟುವಟಿಕೆಗಳಿಗೆ, ಮಹಿಳಾ ಘಟಕಗಳ ಸಭೆಗಳಿಗೆ ಇದು ಉಪಯೋಗವಾಗಿ ಇದೊಂದು ಜ್ಞಾನ ಸೌಧವಾಗಲಿ. ಮಹಿಳೆಯರಲ್ಲಿ ಆತ್ಮವಿಶ್ವಾಸ ಮತ್ತು ಅವಕಾಶಗಳು ಸಿಕ್ಕರೇ ಸಮಾಜವನ್ನು ಉತ್ತಮವಾಗಿ ಪರಿವರ್ತಿಸುತ್ತಾರೆ ಎಂದು ಹೇಳಿದರು.

ಶಾಸಕ ಟಿ.ಡಿ. ರಾಜೇಗೌಡ ಮಾತನಾಡಿ, ಈ ದೇಶಕ್ಕೆ ಅನ್ನ ನೀಡುವ ಸಮುದಾಯ ಎಂದರೇ ಅದು ಒಕ್ಕಲಿಗ ಸಮುದಾಯ. ನಾಡಪ್ರಭು ಕೆಂಪೇಗೌಡರು ಕೂಡ ಒಕ್ಕಲಿಗರೇ. ಅವರು ಬೆಂಗಳೂರು ನಿರ್ಮಾಣ ಮಾಡಿದರು ಅದು ಸಿಲಿಕಾನ್ ಸಿಟಿಯಾಗಿ, ರಾಜ್ಯ ರಾಜಧಾನಿಯಾಗಿ. ಉದ್ಯೋಗಿಗಳ ನೆಲೆಯಾಗಿದೆ. ಆರ್ಥಿಕತೆ ಕೊಡುವ ಎರಡನೇ ರಾಜ್ಯವಾಗಿ ಗುರುತಿಸಿಕೊಂಡಿದೆ ಅದು ಕೆಂಪೇಗೌಡರ ಸಾಧನೆ ಎಂದು ಹೇಳಿದರು.

ಬಾಲಂಗಾಧರನಾಥ ಮಹಾಸ್ವಾಮಿಗಳು 1973 ರಲ್ಲೇ  ಬಡ ಮತ್ತು ಹಿಂದುಳಿದ ಮಕ್ಕಳಿಗೆ ಶಿಕ್ಷಣ ನೀಡಲು ಬಿಕ್ಷಾಟನೆ ಮೂಲಕ ಆದಿ ಚುಂಚನಗಿರಿ ಟ್ರಸ್ಟ್ರ್ ಸ್ಥಾಪನೆ ಮಾಡಿದರು. ಒಕ್ಕಲಿಗರು ಯಾವುದೇ ಜವಾಬ್ದಾರಿ ನೀಡಿದರು ಅದನ್ನ ಸಾಧನೆ ಮಾಡಿ ತೋರಿಸುವ ಸಾಮರ್ಥ್ಯ ಹೊಂದಿದ್ದಾರೆ. ಆ ಸಾಧನೆಗೆ ಬಾಲಂಗಧರನಾಥ ಸ್ವಾಮಿಗಳ ಆಶಿರ್ವಾದ ಇದೆ ಎಂದು ಹೇಳಿದರು.

ಒಕ್ಕಲಿಗರು ಒಕ್ಕಲಿಗರ ಮೇಲೆಯೇ ಟೀಕೆ ಮಾಡುವುದನ್ನ ಮೊದಲು ಬಿಡಬೇಕು.  ಟೀಕಿಸಿದರೆ ಸಮುದಾಯ ಎಲ್ಲಿ ಬೆಳೆಯಲು ಸಾಧ್ಯವಾಗುತ್ತದೆ. ಒಕ್ಕಲಿಗರು ಸರ್ವ ಧರ್ಮಿಯರನ್ನು ಪ್ರೀತಿಯಿಂದ ಕಾಣುವ ಅವ್ಯಸವನ್ನು ಒಕ್ಕಲಿಗ ಸಮುದಾಯ ಮೈಗೂಡಿಸಿಕೊಂಡಿದೆ ಎಂದು ಹೇಳಿದರು.

ವಿಧಾನ ಪರಿಷತ್ ಸದಸ್ಯ ಎಸ್.ಎಲ್ ಭೋಜೇಗೌಡ ಮಾತನಾಡಿ, ಇಂದು ಯುವ ಪೀಳಿಗೆ ಯಾರ ಮಾತುಗಳನ್ನು ಕೇಳದ ರೀತಿಯಲ್ಲಿ ಬೆಳೆಯುತ್ತಿದೆ. ಯುವ ಪೀಳಿಯಲ್ಲಿ ಉತ್ತಮ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುವುದು ಬಹಳ ಕಡಿಮೆಯಾಗುತ್ತಿದೆ. ಅದಕ್ಕೆ ನಾವು ಇಲ್ಲಿ ಒತ್ತು ನೀಡಬೇಕಾಗಿದೆ. ಸಂಬಂಧಗಳು ಇಂದು ಉಳಿಯ ಬೇಕಾಗುತ್ತದೆ. ಅಕ್ಕ?ತಮ್ಮ ಸಂಬಂಧ, ಅಣ್ಣ?ತಂಗಿ, ಅಪ್ಪ? ಮಗ, ಗುರು?ಶಿಷ್ಯರ ಸಂಬಂಧಗಳು ಉಳಿದಿಲ್ಲ. ಸಂಬಂಧದ ಅಡಿಯಲ್ಲಿ ನಾವು ಕೆಲಸ ಮಾಡಬೇಕಾಗಿದೆ. ಸ್ವಸ್ಥ್ಯ ಸಮಾಜದ ಕಡೆಗೆ ಇಂದಿನ ಯುವ ಪೀಳಿಗೆ ಕರೆದುಕೊಂಡು ಹೋಗ ಬೇಕಾಗಿದೆ ಅನಿವಾರ್ಯತೆ ಇದೆ ಎಂದರು.

ಜಿಲ್ಲಾ ಒಕ್ಕಲಿಗರ ಮಹಿಳಾ ಭವನಕ್ಕೆ ಶಾಸಕರ ನಿಧಿಯಿಂದ 10 ಲಕ್ಷ ನೀಡುವುದಾಗಿ ಭರವಸೆ ನೀಡಿದರು.

 

 

 

ಕಾರ್ಯಕ್ರಮದಲ್ಲಿ ಜಿಲ್ಲಾ ಒಕ್ಕಲಿಗರ ಮಹಿಳಾ ಸಂಘದ ನೂತನ ಕಟ್ಟದ ನಿರ್ಮಾಣಕ್ಕೆ ದೇಣಿಗೆ ನೀಡಿದ ದಾನಿಗಳನ್ನು ಗೌರವಿಸಲಾಯಿತು.

 

 

 

ಕಾರ್ಯಕ್ರಮದ ಅಧ್ಯಕ್ಷತೆ ಜಿಲ್ಲಾ ಒಕ್ಕಲಿಗರ ಮಹಿಳಾ ಸಂಘದ ಅಧ್ಯಕ್ಷೆ ರೀನಾ ಸುಜೇಂದ್ರ ವಹಿಸಿದ್ದರು

 

ಕಾರ್ಯಕ್ರಮದಲ್ಲಿ ಕಾರ್ಯಕ್ರಮದಲ್ಲಿ ಶ್ರೀ ಆದಿಚುಂಚನಗಿರಿ ಶೃಂಗೇರಿ ಶಾಖಾ ಮಠದ ಶ್ರೀ ಗುಣನಾಥ ಸ್ವಾಮೀಜಿ, ಜಿಲ್ಲಾ ಒಕ್ಕಲಿಗ ಸಂಘದ ಅಧ್ಯಕ್ಷ ಟಿ.ರಾಜಶೇಖರ್, ವಿಧಾನ ಪರಿಷತ್ ಸದಸ್ಯೆ ಆರತಿ ಕೃಷ್ಣ, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಎಚ್. ಪಿ ಮಂಜೇಗೌಡ, ನಗರ ಸಭೆ ಅಧ್ಯಕ್ಷೆ ಭವ್ಯ ಮಂಜುನಾಥ್, ಜಿಲ್ಲಾ ಒಕ್ಕಲಿಗರ ಸಂಘದ ಉಪಾಧ್ಯಕ್ಷ ಕಾವ್ಯಸುಕುಮಾರ್ ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ