ಇಂದು ಶನಿವಾರ ಮಧ್ಯಾಹ್ನ ಸಿಡಿಲು ಬಡಿದು ಯುವಕನೋರ್ವ ಅಸುನೀಗಿರುವ ಘಟನೆ ಹಾಸನ ತಾಲ್ಲೂಕಿನಲ್ಲಿ ನಡೆದಿದೆ.
ಶನಿವಾರ ಮಧ್ಯಾಹ್ನ ಸುರಿದ ಬಾರೀ ಮಳೆಯ ಸಂದರ್ಭದಲ್ಲಿ ಸಿಡಿಲು ಬಡಿದು ಹಾಸನ ತಾಲ್ಲೂಕಿನ ದುದ್ದ ಹೋಬಳಿಯ ಕುದುರುಗುಂಡಿ ಗ್ರಾಮದ ದಿನೇಶ್(22 ವರ್ಷ) ಸಾವನ್ನಪ್ಪಿದ್ದಾರೆ.
ಊರಿಗೆ ಹೊರಟ್ಟಿದ್ದ ದಿನೇಶ್ ಮಳೆ ಬಂದಿದ್ದರಿಂದ ಮರದ ಕೆಳಗೆ ಆಶ್ರಯ ಪಡೆದಿದ್ದರು ಎನ್ನಲಾಗಿದೆ. ಈ ಸಂದರ್ಭದಲ್ಲಿ ಭಯಾನಕವಾದ ಸಿಡಿಲು ಗುಡುಗು ಪ್ರಾರಂಭವಾಗಿದ್ದು, ಸಿಡಿಲಿನ ಬಡಿತಕ್ಕೆ ದಿನೇಶ್ ಬಲಿಯಾಗಿದ್ದಾರೆ. ವಿಷಯ ತಿಳಿದ ಕುಟುಂಬಸ್ಥರ ಆಕ್ರಂದನ ಮುಗಿಲುಮುಟ್ಟಿದೆ.


