ರಸ್ತೆ ದಾಟುತ್ತಿದ್ದಾಗ ವಾಹನ ಅಪಘಾತ ಸಂಭವಿಸಿ ಗಾಯಗೊಂಡ ನಾಗರಹಾವಿಗೆ ಉರಗ ಪ್ರೇಮಿ ಮೊಹಮ್ಮದ್ ಆರೀಫ್ ಚಿಕಿತ್ಸೆ ನೀಡಿ ರಕ್ಷಣೆ ಮಾಡಿದ ಘಟನೆ ಬಣಕಲ್ ರಾಷ್ಟ್ರೀಯ ಹೆದ್ದಾರಿಯಲ್ಲಿ ನಡೆದಿದೆ.

ಬಣಕಲ್ ಪಶು ಆಸ್ಪತ್ರೆಯಲ್ಲಿ ನಾಗರ ಹಾವಿನ ಹೊಟ್ಟೆಯ ಬಳಿ ಗಾಯವಾಗಿದ್ದು ಬಣಕಲ್ ಪಶುವೈದ್ಯೆ ಪೂಜಾ ಚಿಕಿತ್ಸೆ ನೀಡಿದ್ದಾರೆ. ಬಳಿಕ ನಾಗರ ಹಾವನ್ನು ಸುರಕ್ಷಿತವಾಗಿ ಚಾರ್ಮಾಡಿ ಘಾಟ್ ಅರಣ್ಯಕ್ಕೆ ಬಿಡಲಾಯಿತು. ಈ ಸಂದರ್ಭದಲ್ಲಿ ಪಶು ಆರೋಗ್ಯ ಸಹಾಯಕ ಪ್ರದೀಪ್ ರಾಜ್ ಇದ್ದರು



