ಚಿಕ್ಕಮಗಳೂರಿನಲ್ಲಿ ನಡೆದ ಜಿಲ್ಲಾ ಯುವಜನೋತ್ಸವದಲ್ಲಿ ಮೂಡಿಗೆರೆಯ ಕೆ. ಪಿ.ಪೂರ್ಣಚಂದ್ರ ತೇಜಸ್ವಿ ಜಾನಪದ ಕಲಾತಂಡ ಜಾನಪದ ಗೀತೆ ಗುಂಪು ಸ್ಪರ್ಧೆಯಲ್ಲಿ ಸತತವಾಗಿ 4ನೇ ಬಾರಿ ಪ್ರಥಮ ಸ್ಥಾನ ಗಳಿಸಿ ರಾಜ್ಯ ಮಟ್ಟಕ್ಕೆ ಆಯ್ಕೆ ಯಾಗಿದೆ.
ಸ್ಪರ್ಧೆಯಲ್ಲಿ ಭಾಗವಹಿಸಿದ ಕಲಾವಿದರು : ರಂಜಿತ್ ಕೋಗಿಲೆ. ಮಧು ಬ್ಯಾರುವಳ್ಳಿ. ಕೌಶಿಕ್ ಬಹುಜನ್. ವೆಂಕಟೇಶ್. ರಘು. ಹೆಚ್. ಜಿ. ರಘು. ಪೂರ್ಣೇಶ್. ಮಂಜು. ಕಾರ್ತಿಕ್. ಕಿರಣ್. ಅಧ್ಯಕ್ಷರು: ಸುರೇಶ್ ಎಮ್.ಎಚ್. ಗೌರವ ಅಧ್ಯಕ್ಷರು: ಮಂಜುನಾಥ್. ಖಜಾಂಚಿ: ರವಿ ಹಂತೂರ್
ಕೆ.ಪಿ.ಪೂರ್ಣಚಂದ್ರ ತೇಜಸ್ವಿ ಜಾನಪದ ಕಲಾ ತಂಡವು ಅನೇಕ ವರ್ಷಗಳಿಂದ ಜಾನಪದ ಹಾಡು ಮತ್ತು ನೃತ್ಯಗಳ ಪ್ರದರ್ಶನ ನೀಡುತ್ತಾ ಬರುತ್ತಿದ್ದು, ಜಿಲ್ಲಾ ಮತ್ತು ರಾಜ್ಯಮಟ್ಟದ ಹಲವು ಪ್ರಶಸ್ತಿಗಳನ್ನು ಗಳಿಸಿಕೊಂಡಿದೆ. ನಮ್ಮ ಸಾಂಪ್ರದಾಯಿಕ ಜಾನಪದ ಕಲೆಗಳನ್ನು ಉಳಿಸಿ ಬೆಳೆಸುವ ಕಾರ್ಯದಲ್ಲಿ ತೊಡಗಿದೆ.



