ಕೊಟ್ಟಿಗೆಹಾರ ಉಡುಪಿ ವೈಭವ ಹೋಟೆಲ್ ಹತ್ತಿರ ಭಾರೀ ಗಾತ್ರದ ಗೋದಿ ನಾಗರಹಾವು ಕಾಣಿಸಿಕೊಂಡಿತ್ತು. ವಿಶೇಷವೆಂದರೆ, ಈ ನಾಗರಹಾವು ಸುಡು ಬಿಸಿಲಿನಲ್ಲಿ ಹತ್ತು ಕೋಳಿ ಮೊಟ್ಟೆಗಳನ್ನು ನುಂಗಿದ್ದರಿಂದ ಚಲನೆ ಇಲ್ಲದಂತೆ ಅಸಹಾಯಕವಾಗಿ ಮಲಗಿತ್ತು.
ಸ್ಥಳೀಯರು ಇದನ್ನು ಗಮನಿಸಿ ಸ್ನೇಕ್ ಅರೀಫ್ ತಂಡಕ್ಕೆ ಮಾಹಿತಿ ನೀಡಿದರು. ತಕ್ಷಣವೇ ಸ್ಥಳಕ್ಕೆ ಬಂದ ಸ್ನೇಕ್ ಅರೀಫ್ ತಂಡ, ಎಚ್ಚರಿಕೆಯಿಂದ ಹಾವನ್ನು ಹಿಡಿದು ಸುರಕ್ಷಿತವಾಗಿ ಚಾರ್ಮಾಡಿ ಘಾಟ್ಗೆ ಬಿಟ್ಟಿತು.

ಹಾವು ಅತಿಯಾದ ಮೊಟ್ಟೆಗಳನ್ನು ತಿಂದಿದ್ದರಿಂದ ಸಂಚಲನ ಕಡಿಮೆಯಾಗಿ ಸಮಸ್ಯೆಗೆ ಒಳಗಾಗಿತ್ತು. ಇದು ನೋಡಿದ ಸಾರ್ವಜನಿಕರಲ್ಲಿ ಭಯ ಮತ್ತು ಕುತೂಹಲ ಉಂಟುಮಾಡಿತ್ತು. ಆದರೆ, ಸ್ನೇಕ್ ಅರೀಫ್ ತಂಡದ ಸಮಯೋಚಿತ ಕಾರ್ಯದಿಂದ ಹಾವು ಪ್ರಾಣಾಪಾಯದಿಂದ ಪಾರಾಗಿ ತನ್ನ ಸ್ವಾಭಾವಿಕ ವಾಸಸ್ಥಾನಕ್ಕೆ ಮರಳಿತು.
ದಿನದ ಹಿಂದೆಯಷ್ಟೇ ಬಣಕಲ್ ಕೋಳಿ ಅಂಗಡಿಯೊಂದಕ್ಕೆ ಬಂದು ಸೇರಿಕೊಂಡಿದ್ದ ನಾಗರಹಾವನ್ನು ಸ್ನೇಕ್ ಆರೀಪ್ ಹಿಡಿದು ರಕ್ಷಣೆ ಮಾಡಿ ಅರಣ್ಯಕ್ಕೆ ಬಿಟ್ಟಿದ್ದರು. ಸ್ಥಳೀಯರು ಸ್ನೇಕ್ ಅರೀಫ್ ತಂಡದ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದೆ.



