ಸೀನಿಯರ್ ಚೇಂಬರ್ ಇಂಟರ್ನ್ಯಾಷನಲ್ ಮೂಡಿಗೆರೆ ಲೀಜನ್ ಇದರ ನೂತನ ಅಧ್ಯಕ್ಷರಾಗಿ ಡಾ. ರಾಮಚರಣ ಅಡ್ಯಂತ್ಯಾಯ ಕೆ. ಆಯ್ಕೆಯಾಗಿರುತ್ತಾರೆ.

ಕಳೆದ ಸಾಲಿನಲ್ಲಿ ಅಧ್ಯಕ್ಷರಾಗಿದ್ದ ಬಸವರಾಜ್ ಬಿ. ಬಸವರಾಜು ಅವರ ಸ್ಥಾನಕ್ಕೆ ರಾಮಚರಣ ಅಡ್ಯಂತಾಯ ಅವರನ್ನು ಆಯ್ಕೆ ಮಾಡಲಾಗಿದೆ. ಡಾ. ರಾಮಚರಣ ಅಡ್ಯಂತಾಯ ಅವರು ಈ ಹಿಂದೆ ಮೂಡಿಗೆರೆ ಜೇಸಿಐ ಅಧ್ಯಕ್ಷರಾಗಿಯೂ ಕಾರ್ಯನಿರ್ವಹಿಸಿದ್ದರು. ಬಂಟರ ಸಂಘ, ತುಳುಕೂಟ, ಜಿಲ್ಲಾ ಖಾಸಗಿ ವೈದ್ಯರ ಸಂಘ ಸೇರಿದಂತೆ ವಿವಿಧ ಸಂಘಸಂಸ್ಥೆಗಳಲ್ಲಿ ಸೇವೆ ಸಲ್ಲಿಸಿದ್ದಾರೆ. ಇದೀಗ ಜೇಸಿಐ ನ ಹಿರಿಯ ಸದಸ್ಯರ ಸಂಘಟನೆ ಸೀನಿಯರ್ ಚೇಂಬರ್ ಇಂಟರ್ ನ್ಯಾಷನಲ್ ಇದರ ಮೂಡಿಗೆರೆ ಘಟಕದ ಅಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಯಾಗಿರುತ್ತಾರೆ.
ಘಟಕದ ನೂತನ ಕಾರ್ಯದರ್ಶಿಯಾಗಿ ಮನಮೋಹನ್ ಬಿ.ಎನ್, ಉಪಾಧ್ಯಕ್ಷರಾಗಿ ಚಂದ್ರಕಾಂತ್ ಹೆಚ್. ಸಿ. ಜಗಮೋಹನ್ ಬಿ.ಕೆ., ಪ್ರದೀಪ್ ಕುಮಾರ್ ಹೆಚ್.ಆರ್. ಹರ್ಷವರ್ಧನ್ ಎಂ.ಆರ್. ಖಜಾಂಚಿಯಾಗಿ ವಿನೋದ್ ಕುಮಾರ್ ಶೆಟ್ಟಿ,. ನಿರ್ದೇಶಕರಾಗಿ, ಅತುಲ್ ರಾವ್, ಚಂದ್ರಶೇಖರ್ ಕುನ್ನಳ್ಳಿ. ರವಿಶಂಕರ್ ಕನ್ನಗೆರೆ, ರವಿ ಹೆಚ್.ಎಂ., ತೇಜಸ್ವಿ ಕೆ.ಎಲ್.ಎಸ್. ರವಿಕುಮಾರ್ ಆಯ್ಕೆಯಾಗಿರುತ್ತಾರೆ.



