ಸೀನಿಯರ್ ಚೇಂಬರ್ ಇಂಟರ್ನ್ಯಾಷನಲ್ (ಏರಿಯ ಎಫ್) ಲಿಜನ್ ಮೂಡಿಗೆರೆ ವತಿಯಿಂದ ದಿನಾಂಕ 2/10/2025 ರಂದು ಗುರುವಾರ ಗಾಂಧಿ ಜಯಂತಿ ಆಚರಣೆ ಅಂಗವಾರಿ ಕಸ್ತೂರಿಬಾ ಸೇವಾ ಕೇಂದ್ರ ಭಾರತಿ ಬೈಲಿನಲ್ಲಿ ಸ್ವಚ್ಛತಾ ಕಾರ್ಯಕ್ರಮ ಹಮ್ಮಿಕೊಂಡಲಾಯಿತು.
ಬೆಳಿಗ್ಗೆ 9:30 ಗಂಟೆಗೆ ಸ್ವಚ್ಛತಾ ಕಾರ್ಯಕ್ರಮದ ನಂತರ ಗಾಂಧಿ ಪ್ರತಿಮೆಗೆ ಮಾಲಾರ್ಪಣೆ ಕಾರ್ಯಕ್ರಮ ಮಾಡಲಾಯಿತು. ಸೀನಿಯರ ಛೆoಬರ್ ನ ಅಧ್ಯಕ್ಷರಾದ ಡಾ. ರಾಮಚರಣ ಅಡ್ಡಂತ್ಯಾಯ ಮಾತನಾಡಿ ಗಾಂಧೀಜಿಯವರ ಸ್ವಚ್ಚತೆಗೆ ಆದ್ಯತೆ ನೀಡಿದ್ದರು. ಸರಳ ಮತ್ತು ಸತ್ಯದ ಮಾರ್ಗವನ್ನು ಬೋದಿಸಿದರು. ಅವರು ಹಾಕಿಕೊಟ್ಟ ಮಾರ್ಗದರ್ಶನ ಇಂದಿನ ಪೀಳಿಗೆಗೆ ಪ್ರೇರಣೆಯಾಗಬೇಕು ಎಂದರು. ಗಾಂಧೀಜಿಯವರ ಪತ್ನಿ ಕಸ್ತೂರಿಬಾ ಅವರು ಪತಿಗೆ ತಕ್ಕ ಸತಿಯಾಗಿ ದೇಶಸೇವೆಯಲ್ಲಿ ಪರೋಕ್ಷವಾಗಿ ಸಹಕಾರ ನೀಡಿದರು. ಆವರ ಆದರ್ಶಗಳನ್ನು ಸ್ಮರಿಸುವುದು ಮತ್ತು ಅವುಗಳನ್ನು ನಮ್ಮ ಬದುಕಿನಲ್ಲಿ ಅಳವಡಿಕೊಳ್ಳುವುದು ಬಹುಮುಖ್ಯ ಎಂದರು.

ಸೀನಿಯರ್ ಛೇಂಬರ್ ಪದಾಧಿಕಾರಿಗಳಾದ ಮನಮೋಹನ್, ರವಿ ಹಾಲೂರು, ಪ್ರದೀಪ್ ದುಂಡುಗ, ವಿನೋದ್ ಕುಮಾರ್ ಶೆಟ್ಟಿ, ರವಿಕುಮಾರ್, ರವಿಶಂಕರ್ ಕನ್ನಗೆರೆ ಮುಂತಾದವರು ಇದ್ದರು. ಇದೇ ಸಂದರ್ಭದಲ್ಲಿ ಕಸ್ತೂರಿಬಾ ಸೇವಾ ಕೇಂದ್ರದ ನಿರ್ವಾಹಕರು, ಸಿಬ್ಬಂದಿಗಳು, ಮಕ್ಕಳು ಉಪಸ್ಥಿತರಿದ್ದರು.



