ಕೆಂಗೇರಿಯ ವಿಶ್ವ ಒಕ್ಕಲಿಗ ಮಹಾಸಂಸ್ಥಾನ ಮಠದ ಪೀಠಾಧ್ಯಕ್ಷ ನಿಶ್ಚಲಾನಂದನಾಥ ಸ್ವಾಮೀಜಿ ಆಲ್ದೂರು ಪಟ್ಟಣದ ಶ್ರೀಮಹಾಗಣಪತಿ ದೇವಸ್ಥಾನಕ್ಕೆ ಭೇಟಿ ನೀಡಿದರು.
ನಂತರ ಮಾತನಾಡುತ್ತಾ ಕೆಲ ವರ್ಷಗಳ ಹಿಂದೆ ಚಿಕ್ಕಮಗಳೂರಿನಲ್ಲಿ ಅಸಿಸ್ಟೆಂಟ್ ಕಮಿಷನರ್ ಹಾಗೂ ಪ್ರಭಾರ ಹೆಚ್ಚುವರಿ ಜಿಲ್ಲಾಧಿಕಾರಿಯಾಗಿ ಸೇವೆ ಸಲ್ಲಿಸಿದ್ದನ್ನು ನೆನಪಿಸಿಕೊಂಡರು.
ಆದಿಚುಂಚನಗಿರಿ ಪೀಠಾಧ್ಯಕ್ಷ ಬಾಲಗಂಗಾಧರನಾಥ ಸ್ವಾಮೀಜಿಯ ಆಶೀರ್ವಾದದೊಂದಿಗೆ 10 ವರ್ಷ ವ್ಯಾಸಂಗ ಮಾಡಿದ್ದೆ. ಚಂದ್ರಶೇಖರ ಕುಮಾರನಾಥ ಸ್ವಾಮೀಜಿ ಕಾಯಿಲೆಗೆ ತುತ್ತಾದ ಬಳಿಕ, ಮಠದ ಸೇವಾ ಜವಾಬ್ದಾರಿ ನನಗೆ ವಹಿಸಲಾಯಿತು. 9 ತಿಂಗಳಿಂದ ಮಠದ ಕಾರ್ಯ ನಿರ್ವಹಿಸುತ್ತಿದ್ದೇನೆ ಎಂದು ಅವರು ತಿಳಿಸಿದರು.
ಮಠದಲ್ಲಿ ತ್ರಿಕಾಲ ದಾಸೋಹವನ್ನು ಆರಂಭಿಸಿದ್ದು, ಗ್ರಾಮೀಣ ಭಾಗದ ಬಡ-ಮಧ್ಯಮ ವರ್ಗದ ವಿದ್ಯಾರ್ಥಿ ಗಳಿಗೆ, ಸ್ಪರ್ಧಾತ್ಮಕ ಪರೀಕ್ಷೆಗಳ ವಸತಿ ಸಹಿತ ತರಬೇತಿ ಕೇಂದ್ರ ಆರಂಭಿಸುವ ಯೋಜನೆ ರೂಪಿಸಲಾಗಿದೆ. ಯಾವುದೇ ಜಾತಿ ತಾರತಮ್ಯ ವಿಲ್ಲದೆ ಶಿಕ್ಷಣ ಸೇವೆ ನೀಡುವುದು ನಮ್ಮ ಗುರಿ. ಸಮಾಜದ ಸಹಕಾರ ಅತ್ಯವಶ್ಯಕ ಎಂದರು.
ವಲಯ ಒಕ್ಕಲಿಗ ಸಂಘದ ಅಧ್ಯಕ್ಷ ಅಶೋಕ್ ಡಿ.ಬಿ., ಪದಾಧಿಕಾರಿಗಳಾದ ವಸಂತ್, ಲಕ್ಷ್ಮಣ್ ಗೌಡ, ಮಹಾಗಣಪತಿ ಸೇವಾ ಸಮಿತಿ ಅಧ್ಯಕ್ಷ ಸಿ. ಸುರೇಶ್ ಗೌಡ, ಮುಖಂಡರಾದ ಕವೀಶ್ ಎಚ್.ಎಸ್., ರುದ್ರೇಗೌಡ, ಶಂಕರ್ ಸೂರಪ್ಪನಹಳ್ಳಿ, ಈರೇಗೌಡ, ಕೌಶಿಕ್ ಎ.ಡಿ., ರವಿಕುಮಾರ್ ಎಚ್.ಎಲ್., ರಂಜಿತ್ ದೊಡ್ಡ ಮಾಗರವಳ್ಳಿ, ಹಳಿಯೂರು ಮಹೇಶ್ ಗೌಡ, ಅಣ್ಣೇಗೌಡ, ಗೋಪಾಲ್ ಗೌಡ, ಚಂಪಾ ಜಗದೀಶ್, ಪ್ರತಿಭಾ ನವೀನ್, ಭವ್ಯ ನಟೇಶ್ ಭಾಗವಹಿಸಿದ್ದರು.



