ಶರಣಚಿಂತನೆ. ಮಾನವೀಯತೆ ಮತ್ತು ಮೌಲ್ಯ ಧಾರಿತ ರಾಜಕಾರಣದ ಪ್ರತೀಕ ವಾಗಿದ್ದ ಶ್ರೀ ಭೀಮಣ್ಣಖoಡ್ರೆ ಅವರ ಸೇವೆಗಳು ಚಿರಸ್ಮರಣಿಯ ಎಂದು ಚಿಕ್ಕಮಗಳೂರು ಜಿಲ್ಲಾ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ಕಾರ್ಯನಿರ್ವಾಹಕ ನಿರ್ದೇಶಕ ಡಾ. ಮೋಹನ್ ರಾಜಣ್ಣ ಹೇಳಿದರು.
ಅವರು ಮೂಡಿಗೆರೆ ತಾಲ್ಲೂಕು ಗೋಣಿಬೀಡು ಪುಷ್ಪಗಿರಿ ಸಾಂಸ್ಕೃತಿಕ ಪ್ರತಿಷ್ಠಾನ (ರಿ )ವತಿಯಿಂದಏರ್ಪಡಿಸಿದ್ದ ರಾಷ್ಟ್ರೀಯ ಅಖಿಲಭಾರತವೀರಶೈವ ಲಿಂಗಾಯತ ಮಹಾಸಭಾ ಮಾಜಿ ಅಧ್ಯಕ್ಷ ರಾದ ಲಿಂಗಕ್ಯ ಶ್ರೀ ಶತಯುಷಿ ಶ್ರೀ ಭೀಮಣ್ಣ ಖoಡ್ರೆ ರವರನುಡಿ ನಮನ ಹಾಗೂ ಪುಣ್ಯ ಸ್ಮರಣೆ ಕಾರ್ಯಕ್ರಮ ದಲ್ಲಿ ಅವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಮಾತನಾಡಿದರು.
ಸ್ವಾತಂತ್ರ ಹೋರಾಟ ಹೈದರಾಬಾದ್ ಕರ್ನಾಟಕ ವಿಮೋಚನೆ. ಕರ್ನಾಟಕ ಏಕೀ ಕರಣ ಚಳುವಳಿ ಯಲ್ಲಿ ಮುಂಚೂಣಿ ಯಲ್ಲಿ ನಿಂತು ಬೀದರ್ ಜಿಲ್ಲೆ ಯನ್ನು ಕರ್ನಾಟಕ ದಲ್ಲೇ ಉಳಿಸಿ ಕೊಳ್ಳಲು ಹೋರಾಡಿದ ನಾಯಕತ್ವ ಅವರನ್ನು ಜನ ಮಾನದ ನಾಯಕರನ್ನಗಿಸಿತು ಎಂದು ಸ್ಮರಿಸಿದರು.
ಅಧ್ಯಕ್ಷತೆ ಯನ್ನು ಪುಷ್ಪಗಿರಿ ಸಾಂಸ್ಕೃತಿಕ ಪ್ರತಿಷ್ಠಾನದ ಮ್ಯಾನೇಜಿಂಗ್ ಟ್ರಸ್ತಿ ಉಮಾ ಮೋಹನ್ ವಹಿಸಿ ಮಾತನಾಡುತ್ತ ಭೀಮಣ್ಣಖoಡ್ರೆ ರವರು ಸಮಾಜಸೇವೆಗೆ ಬದುಕನ್ನೇ ಸಮರ್ಪಿಸಿದ ಲೋಕ ನಾಯಕರ ಅಗಲಿಕೆ ನಾಡಿಗೆ ತುಂಬಾ ಲಾರದ ನಷ್ಟ ವಾಗಿದೆ ಎಂದರು.
ಟ್ರಸ್ಟ ನ ಕಾರ್ಯದರ್ಶಿ ಸಿ. ಸಿ.ರಾಜಣ್ಣ.. ಬಾಂದವ್ಯ.ಡಿಂಪಲ್. ಗಂಗಾಧರ್. ಅಶ್ವಿನಿ. ಪ್ರಸನ್ನ. ಮಾನ್ಯ. ಗೌರಮ್ಮ.ಹಾಗೂ ಮುಂತಾದವರು ಇದ್ದರು



