ಕಾಫಿ ನಾಡಿನಲ್ಲಿ ಜೀವ ಆನೆಗೆ ಕಾರಣವಾಗಿದ್ದ ಕಾಡಾನೆಯನ್ನು ಸರಿ ಹಿಡಿಯಲಾಗಿದೆ
ಕಳೆದ ಸೋಮವಾರ ಹಾವೇರಿ ಮೂಲದ ಕಾರ್ಮಿಕ ಯಲಪ್ಪ ಎನ್ನವವರನ್ನು ಚಿಕ್ಕಮಗಳೂರು ತಾಲೂಕಿನ ಹುಣಸೇಹಳ್ಳಿ ಸಮೀಪದ ಪುರ ಗ್ರಾಮದಲ್ಲಿ ಕಾಡಾನೆ ಬಲಿ ಪಡೆದಿತ್ತು. ಭಾನುವಾರ ಅದೇ ಜಾಗದಲ್ಲಿ ಹಾವೇರಿಯ ಹಾನಗಲ್ ಮೂಲದ ಬೋರಮ್ಮ ಎನ್ನುವವರನ್ನು ಕಾಡಾನೆ ತುಳಿದು ಸಾಯಿಸಿತ್ತು. ಇದೀಗ ಮಹಿಳೆ ಬಲಿ ಪಡೆದ ಅರ್ಧ ಗಂಟೆಯಲ್ಲೇ ಕಾಡಾನೆ ಸೆರೆ ಯಶಸ್ವಿಯಾಗಿದೆ.
ಚಿಕ್ಕಮಗಳೂರು ತಾಲೂಕಿನ ಬೆರಣಗೋಡು ಸಮೀಪದ ಕೆರೆಮನೆ ಬಳಿ ಅಧಿಕಾರಿಗಳು ಹಾಗೂ ವೈದ್ಯರ ತಂಡ ಕಾಡಾನೆಗೆ ಅರವಳಿಕೆ ಚುಚ್ಚು ಮದ್ದು ನೀಡಿ ಸಾಕಾನೆಗಳ ಸಹಾಯದಿಂದ ಕಾಡಾನೆಯನ್ನು ಸೆರೆ ಹಿಡಿದಿದ್ದಾರೆ.



