ಕನ್ನಡ ಜಾನಪದ ಪರಿಷತ್ ಮಹಿಳಾ ಘಟಕ ಗೋಣಿಬೀಡು ಹೋಬಳಿ ವತಿಯಿಂದ ಆನ್ ಲೈನ್ ಜಾನಪದ ಸ್ಪರ್ಧೆ ಏರ್ಪಡಿಸಲಾಗಿತ್ತು. ಸ್ಪರ್ಧೆಯಲ್ಲಿ ಹಲವು ಗಾಯಕರು ಆಸಕ್ತಿಯಿಂದ ಭಾಗವಹಿಸಿದ್ದರು.
ಸ್ಪರ್ಧೆಯಲ್ಲಿ ಪ್ರಥಮ ಬಹುಮಾನ ನವ್ಯ ಅಜಿತ್, ದ್ವಿತೀಯ ಬಹುಮಾನ ರಂಜಿನಿ ಗಣೇಶ್, ತೃತೀಯ ಬಹುಮಾನ ದೀಕ್ಷಿತ ಅವರು ಪಡೆದುಕೊಂಡರು.

ಮೂಡಿಗೆರೆ ಅವಿನ್ ಸ್ವರ ಸಂಗಮ ಸ್ಟುಡಿಯೋದಲ್ಲಿ ನಡೆದ ಬಹುಮಾನ ವಿತರಣೆ ಸಮಾರಂಭದಲ್ಲಿ ಕನ್ನಡ ಜಾನಪದ ಪರಿಷತ್ ಮಹಿಳಾ ಘಟಕ ಗೋಣಿಬೀಡು ಹೋಬಳಿ ಅಧ್ಯಕ್ಷರು ದೀಪಿಕಾ ಎ.ಆರ್, ಕಾರ್ಯದರ್ಶಿ ಆಶಾ ಜಯಕುಮಾರ್, ಅವಿನ್ ಸ್ವರ ಸಂಗಮದ ಗಣೇಶ್ ಮಗ್ಗಲಮಕ್ಕಿ, ಮಂಜು ಬಕ್ಕಿ, ರವಿ ಬಕ್ಕಿ, ವಸಂತ್ ಹಾರ್ಗೋಡು, ಮಾಜಿ ಪ್ರಧಾನಿ ಹೆಚ್.ಡಿ ದೇವೇಗೌಡ ಪಿ ಎ ಚಂದ್ರಶೇಖರ್ ದಂಪತಿಗಳು ಭಾಗವಹಿಸಿ ಶುಭ ಹಾರೈಸಿದರು.
ಇದೇ ಸಂದರ್ಭದಲ್ಲಿ ಗೀತಾಗಾಯನ ಫೆಸ್ ಬುಕ್ ಲೈವ್ ಕಾರ್ಯಕ್ರಮ ನಡೆಸಲಾಯಿತು.


