ಕೊಟ್ಟಿಗೆಹಾರದ ಕೆ.ಪಿ.ಪೂರ್ಣಚಂದ್ರ ತೇಜಸ್ವಿ ಪ್ರತಿಷ್ಠಾನದಿಂದ ಚಿಕ್ಕಮಗಳೂರಿನ ಕುವೆಂಪು ಕಲಾಮಂದಿರದಲ್ಲಿ ನಡೆದ ಪ್ರಾಜೆಕ್ಟ್ ಪಂಚತಂತ್ರ ನಾಟಕ ಜನಮನ ಸೂರೆಗೊಂಡಿತು.
ಪಂಚತಂತ್ರದ ಪ್ರಾಣಿಗಳ ಕಥೆಗಳನ್ನು ಇಂದಿನ ಜಾಯಮಾನಕ್ಕೆ ಒಗ್ಗಿಸಿ ಮಾಡಿದ ರಂಗಪ್ರಯೋಗ ಪ್ರೇಕ್ಷಕರ ಮೆಚ್ಚುಗೆಗೆ ಪಾತ್ರವಾಯಿತು. ಪಂಚತಂತ್ರದ 15ಕ್ಕೂ ಹೆಚ್ಚು ಕಥೆಗಳಿಗೆ ಜೀವ ತುಂಬುವ ಮೂಲಕ ನಾಟಕ ವಿಮರ್ಶಾತ್ಮಕ ಚಿಂತನೆ ಮತ್ತು ಸಾಮಾಜಿಕ ಭಾಗವಹಿಸುವಿಕೆಯನ್ನು ಪ್ರೇರೇಪಿಸಿತು. ಸುಮಾರು 500ಕ್ಕೂ ಹೆಚ್ಚು ಪ್ರೇಕ್ಷಕರು ಆಗಮಿಸಿ ನಾಟಕವನ್ನು ವೀಕ್ಷಿಸಿದರು. ನಿರ್ದಿಗಿಂತ ತಂಡ ನಾಟಕವನ್ನು ಪ್ರಸ್ತುತ ಪಡಿಸಿದ್ದು ಅರುಣ್ ಲಾಲ್ ಅವರು ನಾಟಕವನ್ನು ನಿರ್ದೇಶಿಸಿದರು.



