ರಾಜ್ಯದ ಮಲೆನಾಡಿನ ಜನರ ನಿದ್ದೆಗೆಡಿಸಿರುವ ಕಸ್ತೂರಿ ರಂಗನ್ ವರದಿ ಆಧಾರದಲ್ಲಿ ಪರಿಸರ ಸೂಕ್ಷ್ಮ ಪ್ರದೇಶಗಳ ಘೋಷಣೆಗೆ ಅಧಿಸೂಚನೆ ಹೊರಡಿಸಲಾಗಿದೆ. ಕಾಫಿನಾಡಿನ ರೈತರ /ಕಾರ್ಮಿಕರ ಜೀವನಕ್ಕೆ ಮಾರಕವಾಗಿರುವ, ಈ ಅಧಿಸೂಚನೆ ಕುರಿತು ಮಾನ್ಯ ಮುಖ್ಯಮಂತ್ರಿಗಳಾದ ಡಿ.ಕೆ.ಶಿವಕುಮಾರ್ ರವರು ಸೆಪ್ಟೆಂಬರ್ 21-22 ಹಾಗೂ 23 ರಂದು ವಿಶೇಷ ಅಧಿವೇಶನ ಕರೆದಿರುವುದು ಸ್ವಾಗತಾರ್ಹ.
ಈ ಮಧ್ಯೆ ಕಸ್ತೂರಿ ರಂಗನ್ ವರದಿ ವಿಚಾರವಾಗಿ ರೈತರ ಜೊತೆ ನೇರ ಸಂವಾದಕ್ಕಾಗಿ ಸೆ.19 ರಂದು ಮುಖ್ಯಮಂತ್ರಿಗಳು ಬಾಳೆಹೊನ್ನೂರಿಗೆ ಆಗಮಿಸುತ್ತಿದ್ದಾರೆ. ಈ ಸಂದರ್ಭದಲ್ಲಿ ಕಾಫಿನಾಡಿನ ಮೂರು ಜಿಲ್ಲೆಗಳ ರೈತರು / ಬೆಳೆಗಾರರು ಹಾಗೂ ತೀರ್ಥಹಳ್ಳಿ / ಶಿವಮೊಗ್ಗ ಭಾಗದ ರೈತ ಬಾಂಧವರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಸಂವಾದದಲ್ಲಿ ಭಾಗವಹಿಸುವ ಮೂಲಕ ಈ ಅವಕಾಶದ ಸದುಪಯೋಗ ಪಡೆಯಬೇಕೆಂದು ಮೂಡಿಗೆರೆ ತಾಲ್ಲೂಕು ಬೆಳೆಗಾರರ ಸಂಘದ ಅಧ್ಯಕ್ಷರಾದ ಬಿ ಆರ್ ಬಾಲಕೃಷ್ಣರವರು ಕರೆ ನೀಡಿದ್ದಾರೆ.


