nayana 23

 

 

ಪರ್ಸಂಟೇಜ್ ಮತ್ತು ಭ್ರಷ್ಟಾಚಾರಗಳ ಜನಕ ಸುಮಾರು ಅರವತ್ತು ವರ್ಷ ದೇಶ ಅಳಿದ ಕಾಂಗ್ರೆಸ್ ಪಕ್ಷವೆ ಅಗಿದ್ದು. ನೀವು ಹಾಕಿದ ಭ್ರಷ್ಟ ಕಳೆಯನ್ನು ಬುಡ ಸಮೇತ ಕೀಳಲು ಮೋದಿಜಿಯವರ ನೇತೃತ್ವದ ಬಿಜೆಪಿ ಸರ್ಕಾರಗಳು ಪ್ರಯತ್ನಿಸುತ್ತಿವೆ ಎಂದು ಬಿಜಿಪಿ ಮೂಡಿಗೆರೆ ತಾಲ್ಲೂಕು ವಕ್ತಾರ ನಯನ ತಳವಾರ ತೀಳಿಸಿದ್ದಾರೆ.

ಅವರು ಹೇಳಿಕೆಯಲ್ಲಿ ತಿಳಿಸಿ. ಮಂಗಳವಾರ ಕಾಂಗ್ರೆಸ್ ರಾಜ್ಯದ್ಯಕ್ಷ ಡಿ.ಕೆ. ಶಿವಕುಮಾರ್ ಮೂಡಿಗೆರೆಯಲ್ಲಿ ಮಾತನಾಡುವಾಗ. ತನ್ನದೆ ಸೋಲಾರ್ ಹಗರಣ. ಅಕ್ರಮ ಅಸ್ತಿಗಳಿಕೆ. ಬಂಡೆ ಅಕ್ರಮಗಳು. ರೌಡಿಗಿರಿ ಸೇರಿದಂತೆ ಕಾಂಗ್ರೆಸ್ ಪಕ್ಷ ಈ ಹಿಂದೆ 2ಜಿ ಹಗರಣ. ಕಲ್ಲಿದ್ದಲು. ಗಣಿ. ಕಾಮನ್ವೆಲ್ತ್. ಬೋಪೋರ್ಸ್ ಸೇರಿದಂತೆ ತಮ್ಮದೇ ಹಗರಣಗಳ ಮೂಲಕ ದೇಶವನ್ನು ಹಾಳುಗೆಡವಿದ್ದನ್ನೆ ಡಿಕೆಶಿಯವರು ನೆನಪಿಸಿಕೊಂಡು ಬಿಜೆಪಿಗೆ ಹೋಲಿಸಿದ ರೀತಿ ಮಾತನಾಡಿರಬಹುದು.

ನೀವು ಹೇಳಿದ ಹಾಗೆ ಬಿಜೆಪಿ ದೇಶ ಹಾಳುಗೆಡವಿಲ್ಲ. ಕೋವಿಡ್ ಅನ್ನು ವಿಶ್ವವೆ ಬೆರಗುಗೊಳಿಸುವ ರೀತಿ ನಿರ್ವಹಿಸಿದೆ. ಅತ್ಮ ನಿರ್ಭರ ಭಾರತ ಮೂಲಕ ಇಂದು ವಿಶ್ವಗುರು ಆಗುವತ್ತ ದಾಪುಗಾಲಿಟ್ಟಿದೆ. ರಪ್ತು ಹೆಚ್ಚಳವಾಗಿದೆ. ಅರ್ಥಿಕತೆ ಸದೃಡವಾಗಿದೆ. ಪರಿಶಿಷ್ಟ ಜಾತಿ ಪಂಗಡದವರಿಗೆ ಮೀಸಲಾತಿ ಹೆಚ್ಚಳವಾಗಿದೆ. ರಾಜ್ಯದಲ್ಲಿ ಅರ್. ಅಶೋಕ್ ಕಂದಾಯಮಂತ್ರಿ ಅದ ಮೇಲೆ ಬಗರ್ ಹುಕುಂ. ಡ್ರೀಮ್ಡ್ ಪಾರೆಸ್ಟ್ ಸೇರಿದಂತೆ ಎಲ್ಲಾ ಒತ್ತುವರಿ ಸಮಸ್ಯೆ ಬಗೆಹರಿಸಲಾಗುತ್ತಿದೆ. ಸರ್ಫೇಸಿ ಕಾಯಿದೆ ನಿಮ್ಮ ಕಾಲದ ಪಾಪದ ಕೂಸು. ಹಿಂದುಗಳನ್ನು ಮತ ಬ್ಯಾಂಕ್ ಅಗಿ ಪರಿವರ್ತನೆ ಮಾಡಿ ದ್ವಿತೀಯ ದರ್ಜೆ ನಾಗರಿಕರನ್ನಾಗಿಸಿದ್ದು. ಧರ್ಮಧವ್ರ್ಮಗಳನ್ನು ಒಡೆದು ಅಳಿದ್ದು. ಶಾಧಿಬಾಗ್ಯ. ಅಲ್ಪಸಂಖ್ಯಾತ ಮಕ್ಕಳಿಗೆ ಪ್ರವಾಸ ಭಾಗ್ಯ. ಟಿಪ್ಪು ಜಯಂತಿ ಮಾಡಿದ್ದು ಇಡಿ ದೇಶಕ್ಕೆ ಗೊತ್ತಿರುವ ವಿಚಾರ.

ಕಸ್ತೂರಿ ರಂಗನ್ ವರದಿಯನ್ನು ಜಾರಿಗೋಳಿಸುವುದಿಲ್ಲ ಎಂದು ಈಗಾಗಲೆ ಮುಖ್ಯಮಂತ್ರಿಗಳೆ ತಿಳಿಸಿದ್ದಾರೆ. ನಿಮ್ಮ ಸರ್ಕಾರದ ಅವಧಿಯಲ್ಲೆ ಮಲೆನಾಡಿನಲ್ಲಿ ಒತ್ತುವರಿ ಸಮಸ್ಯೆ ಉಲ್ಬಣಗೋಳಿಸಿ ರೈತರು ಬಡವರೆನ್ನದೆ ಒಕ್ಕಲಿಬ್ಬಿಸಿದ್ದು. ಬಿಜೆಪಿ ಸರ್ಕಾರ ಬಂದ ಮೇಲೆ ಯಾರನ್ನು ಬಲವಂತವಾಗಿ ಒಕ್ಕಲೆಬ್ಬಿಸಿಲ್ಲ. ಮಲೆನಾಡಿನಲ್ಲಿ ಜ್ವಲಂತ ಸಮಸ್ಯೆಗಳನ್ನು ಕಾಂಗ್ರೆಸ್ ಪಕ್ಷವೆ ಹುಟ್ಟು ಹಾಕಿರುವುದು ಎಂದು ಸಾಮಾನ್ಯ ಜನರಿಗು ತಿಳಿದಿದ್ದು. ನಿಮ್ಮ ಭ್ರಷ್ಟಾಚಾರ ಮುಚ್ಚಿ ಹಾಕಲು ಬಿಜೆಪಿ ದೂರುವುದು ಸರಿ

Leave a Reply

Your email address will not be published. Required fields are marked *

ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ