ರಸ್ತೆಯಲ್ಲಿ ಸಿಕ್ಕಿದ ಮೊಬೈಲ್ ಫೋನ್ ಅನ್ನು ವಾರಸುದಾರರಿಗೆ ಹಿಂದಿರುಗಿಸಿ ಯುವಕರ ತಂಡವೊಂದು ಮೆಚ್ಚುಗೆಗೆ ಪಾತ್ರವಾಗಿದೆ.
ಚಿಕ್ಕಮಗಳೂರು ಜಿಲ್ಲೆ ಆಲ್ದೂರು ಹೋಬಳಿ ಹಾಂದಿ ಗ್ರಾಮದ ಹೆಲ್ಪ್ ಲೈನ್ ಸೇವಾ ತಂಡದ ಸದಸ್ಯರು ಗ್ರಾಮದ ಹೊಸಪೇಟೆ ಸಮೀಪ ರಸ್ತೆಯಲ್ಲಿ ಸಿಕ್ಕಿದ ಮೊಬೈಲ್ ಫೋನ್ ಅನ್ನು ವಾರಸುದಾರರಿಗೆ ಹಿಂದಿರುಗಿಸಿದ್ದಾರೆ.
ಮೊಬೈಲ್ ಫೋನ್ ಅನ್ನು ಆಲ್ದೂರು ಪೊಲೀಸ್ ಠಾಣೆ ಪಿಎಸ್ಐ ಅಕ್ಷತಾ ಅವರ ಸಮ್ಮುಖ ವಾರಸುದಾರರಿಗೆ ನೀಡಲಾಗಿದೆ.
ಈ ಸಂದರ್ಭದಲ್ಲಿ ಪ್ರಕಾಶ್ ಆಟೋ, ಸುರೇಶ್ ಆಟೋ, ಬಡಾವಣೆ ಸುರೇಶ್ ಟೈಲರ್ ಹಾಂದಿ, ರಾಜೇಶ್ ಆಲ್ದೂರು, ಸುರೇಶ್ ಜೋಶಿರವರು ಇದ್ದರು.
ಹೇಲ್ಪ್ ಲೈನ್ ಸೇವಾ ತಂಡ ಹಾಂದಿ ಸದಸ್ಯರಿಗೆ ಮೊಬೈಲ್ ವಾರಸುದಾರರು, ಪೊಲೀಸರು ಮತ್ತು ಸಾರ್ವಜನಿಕರು ಪ್ರಶಂಸೆ ವ್ಯಕ್ತಪಡಿಸಿದ್ದಾರೆ.



