ಮೂಡಿಗೆರೆ ತಾಲ್ಲೂಕಿನ ಹಂತೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಆಡಳಿತ ಮಂಡಳಿಗೆ ನಡೆದ ಚುನಾವಣೆಯಲ್ಲಿ ಬಿಜೆಪಿ ಬೆಂಬಲಿತರು ಮೇಲುಗೈ ಸಾಧಿಸಿದ್ದಾರೆ.
ಸಂಘದ 12 ಮಂದಿ ನಿರ್ದೇಶಕ ಸ್ಥಾನಕ್ಕೆ ಜಿದ್ದಾಜಿದ್ದಿನಿಂದ ಕೂಡಿದ ಚುನಾವಣೆಯಲ್ಲಿ ಬಿಜೆಪಿ ಬೆಂಬಲಿತ ತಂಡ 9 ಸ್ಥಾನಗಳನ್ನು ಗಳಿಸುವ ಮೂಲಕ ಮತ್ತೊಮ್ಮೆ ಆಡಳಿತದ ಚುಕ್ಕಾಣಿ ಹಿಡಿಯಲು ಸಜ್ಜಾಗಿದೆ.
ಆಯ್ಕೆಯಾದ ನೂತನ ನಿರ್ದೇಶಕರುಗಳ ವಿವರ
- ಹೆಚ್.ಜಿ. ಉತ್ತಮ್ ಕುಮಾರ್, ಹಂತೂರು
- ಹೆಚ್.ಕೆ.ಸುರೇಶ್ ಹಂತೂರು
- ನೇಪಾ ಆದಿತ್ಯ, ಹಂತೂರು
- ವಿನೋದ್ ಕಣಚೂರು
- ಕೆ.ಎನ್. ನಯನ್ ಕುಮಾರ್, ಕಣಚೂರು
- ಶೋಭಾ ಕಣಚೂರು
- ಆದರ್ಶ ಕನ್ನೇಹಳ್ಳಿ
- ಪ್ರಸನ್ನ ಅಂಗಡಿ
- ಶ್ರೀನಿವಾಸ ಉಗ್ಗೇಹಳ್ಳಿ
- ರತನ್ ದೇವರುಂದ
- ಮಿಥುನ್ ಕಣಚೂರು (ಸಾಲ ಪಡೆಯದ ಕ್ಷೇತ್ರ)
- ಸೀತಮ್ಮ ಉಗ್ಗೇಹಳ್ಳಿ (ಎಸ್ಟಿ ಮೀಸಲು, ಅವಿರೋಧ ಆಯ್ಕೆ)
ಸಾಲ ಪಡೆಯದ ಕ್ಷೇತ್ರದಲ್ಲಿ ಮಿಥುನ್ ಕಣಚೂರು ಮತ್ತು ಮೋಹನ್ ಹಂತೂರು ತಲಾ 17 ಮತಗಳನ್ನು ಗಳಿಸಿದ್ದರು. ಲಾಟರಿ ಮೂಲಕ ಫಲಿತಾಂಶ ಪ್ರಕಟಿಸಿದಾಗ ಮಿಥುನ್ ಕಣಚೂರು ಅವರಿಗೆ ಮೊದಲ ಅವಧಿಗೆ ಅದೃಷ್ಟ ಒಲಿಯಿತು.
ಚುನಾವಣಾ ಅಧಿಕಾರಿಯಾಗಿ ಅಂಗಡಿ ಗ್ರಾಮ ಪಂಚಾಯಿತಿ ಪಿಡಿಓ ಚೇತನ್ ಕಾರ್ಯನಿರ್ವಹಿಸಿದರು.



