ಜಮೀನಿನ ನಕ್ಷೆ ಸಿದ್ದಪಡಿಸಿಕೊಡಲು ಲಂಚ ಪಡೆಯುತ್ತಿದ್ದ ಸರ್ವೆಯರ್ ಒಬ್ಬರು ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ.
ಕಡೂರು ತಾಲ್ಲೂಕು ಸರ್ವೆಯರ್ ಅಶೋಕ್ ಹುಲ್ಲೇಹಳ್ಳಿ ಗ್ರಾಮದ ಸರ್ವೆ ನಂ 61/03 ರಲ್ಲಿರುವ ವೆಂಕಟೇಶ್ ರವರ ಜಮೀನಿಗೆ ಬಂದು ಹಳೆ ನಕ್ಷೆ ಪ್ರಕಾರ ಸರ್ವೆ ಮಾಡಿದ್ದರು. ಹಳೆ ನಕ್ಷೆ ತಪ್ಪಾಗಿದ್ದರಿಂದ ಅದನ್ನು ರದ್ದು ಪಡಿಸಿ ಹೊಸದಾಗಿ ಜಮೀನಿನ ನಕ್ಷೆ ತಯಾರಿಸಿಕೊಡುವಂತೆ ಕಡೂರಿನ ಎ ಡಿ ಎಲ್ ಆರ್. ರವರಿಗೆ ಅರ್ಜಿ ಸಲ್ಲಿಸಿದ್ದರು.
ಸರ್ವೇಯರ್ ಅಶೋಕ್ 1,200/-ರೂ ಹಣ ಪಡೆದುಕೊಂಡು ಎಲ್ಲಾ ರೆಕಾರ್ಡ್ ರೆಡಿ ಮಾಡಿ ಕೊಡಲು ಮತ್ತೆ 4,000/-ರೂ ಕೊಡುವಂತೆ ಲಂಚದ ಹಣಕ್ಕೆ ಬೇಡಿಕೆ ಇಟ್ಟಿದ್ದರು ಎನ್ನಲಾಗಿದೆ.
ಜಮೀನಿಗೆ ಬಂದಿದ್ದ ಸರ್ವೆಯರ್ ಮತ್ತೆ ಐದು ಸಾವಿರ ಕೇಳಿ ಅಂತಿಮವಾಗಿ ನಾಲ್ಕು ಸಾವಿರ ಕೊಡಿ ಎಂದು ಕೇಳಿದ್ದರು ಎಂದು ತಿಳಿಸಲಾಗಿದೆ .
ಹಣ ಪಡೆಯುತ್ತಿದ್ದ ಸಂದರ್ಭದಲ್ಲಿ ಲೋಕಾಯುಕ್ತ ದಾಳಿ ನಡೆಸಿದ್ದು ಆರೋಪಿಯನ್ನು ಬಂಧಿಸಲಾಗಿದೆ.



