ದಿನಾಂಕ 10.02.2025 ರಿಂದ 16.02.2025 ರವರೆಗೆ ಚಿಕ್ಕಮಗಳೂರು ಡಿ.ಎ.ಆರ್. ನಲ್ಲಿ ಆಯೋಜಿಸಲಾಗಿದ್ದ ನಾಗರೀಕ ಬಂದೂಕು ತರಬೇತಿ ಶಿಬಿರದ ಸಮಾರೋಪ ಸಮಾರಂಭವು ಸೋಮವಾರ ನಡೆಯಿತು.
530 ಶಿಬಿರಾರ್ಥಿಗಳಿಗೆ RPI DAR ರವರು ಪ್ರಮಾಣ ವಚನ ಬೋಧಿಸಿ, ಡಾ. ವಿಕ್ರಮ ಅಮಟೆ, IPS, ಪೊಲೀಸ್ ಅಧೀಕ್ಷಕರವರು ಪ್ರಮಾಣ ಪತ್ರಗಳನ್ನು ವಿತರಿಸಿದರು.
ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಯಶ್ ಪಾಲ್ ಕ್ಷೀರ್ ಸಾಗರ್, IFS, ಅರಣ್ಯ ಸಂರಕ್ಷಣಾಧಿಕಾರಿಗಳು, ಚಿಕ್ಕಮಗಳೂರು ವೃತ್ತ ರವರು ಆಗಮಿಸಿದ್ದು, ಸುಮಂತ್, ತಹಸೀಲ್ದಾರ್, ಚಿಕ್ಕಮಗಳೂರು ತಾಲ್ಲೂಕ್ ಮತ್ತು ಬಂದೂಕು ತರಬೇತಿ ನೀಡಿದ ಪೊಲೀಸ್ ಅಧಿಕಾರಿ ಸಿಬ್ಬಂದಿಗಳು ಭಾಗವಹಿಸಿದ್ದರು.




