ಮೂಡಿಗೆರೆ ಸಚೇತನ ಯುವ ಸಂಘದ ಹಿರಿಯ ಸದಸ್ಯ ಕೃಷ್ಣಮೂರ್ತಿ ಯವರು ಸಚೇತನ ಸಂಘದ ಮುಖಾಂತರ ಡಿ.ಎಸ್. ಬಿ. ಜಿ. ಸರ್ಕಾರಿ ಪದವಿ ಕಾಲೇಜಿನ ಬಿಕಾಂ ಬಿಬಿಎಂ ವಿದ್ಯಾರ್ಥಿ ಗಳಿಗೆ ಅನುಕೂಲ ವಾಗುವಂತೆ ಸುಮಾರು ನಲವತ್ತು ಸಾವಿರ ರೂಪಾಯಿ ಮೌಲ್ಯದ ಪುಸ್ತಕಗಳನ್ನು ಕೊಡುಗೆ ನೀಡಿದರು.
ಸೋಮವಾರ ಕಾಲೇಜಿಗೆ ತೆರಳಿದ ಸಂಘದ ಸದಸ್ಯರು ಪುಸ್ತಕಗಳನ್ನು ಕಾಲೇಜಿನ ಪ್ರಾಂಶುಪಾಲರಿಗೆ ಹಸ್ತಾಂತರಿಸಿದರು. ಈ ಸಂದರ್ಭದಲ್ಲಿ ಕಾಲೇಜಿನ ಪ್ರಾಂಶುಪಾಲ ದಶರಥ ರವರು ಮಾತನಾಡಿ ಸಚೇತನ ಯುವ ಸಂಘದ ಕಾರ್ಯವನ್ನು ಅಭಿನಂದಿಸಿ ಇನ್ನು ಮುಂದೆಯೂ ಸಚೇತನ ಸಂಘವು ಬಡ ವಿದ್ಯಾರ್ಥಿಗಳಿಗೆ ಹೆಚ್ಚಿನ ಸಹಾಯ ಮಾಡಲಿ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಂಘದ ಅಧ್ಯಕ್ಷರಾದ ರವಿ ರಾಜ್ ಅರಸ್ ವಹಿಸಿದ್ದರು. ಈ ಸಂದರ್ಭದಲ್ಲಿ ಪುಸ್ತಕ ದಾನಿಗಳಾದ ಕೃಷ್ಣಮೂರ್ತಿ ಭಟ್, ಸಂಘದ ಸದಸ್ಯರಾದ ವಿಶ್ವಕುಮಾರ್, ನಿಶ್ಚಲ್, ಪ್ರವೀಣ್ ಜೈನ್, ಮಂಜುನಾಥ್ ಬಿ.ಎನ್, ಟಿ.ಹರೀಶ್, ಕಾಲೇಜಿನ ಉಪನ್ಯಾಸಕರು ಉಪಸ್ಥಿತರಿದ್ದರು.



