ಮೂಡಿಗೆರೆ ತಾಲ್ಲೂಕು ಬ್ರಹ್ಮಶ್ರೀ ನಾರಾಯಣಗುರು ಮಲಯಾಳಂ ಸೇವಾ ಸಮಾಜದ ನೂತನ ಪದಾಧಿಕಾರಿಗಳ ಆಯ್ಕೆ ಇತ್ತೀಚೆಗೆ ನಡೆಯಿತು.
ಮೂಡಿಗೆರೆ ತಾ.ಪಂ. ದೀನದಯಾಳ್ ಸಭಾಂಗಣದಲ್ಲಿ ದಿನಾಂಕ 29-06-2025ರಂದು ಸಂಘದ ಮಾಜಿ ಅಧ್ಯಕ್ಷ ಸಿ.ವಿ. ಮಹೇಶ್ ಅವರ ಅಧ್ಯಕ್ಷತೆಯಲ್ಲಿ ನಡೆದ ಸಂಘದ ಸರ್ವ ಸದಸ್ಯರ ಸಭೆಯಲ್ಲಿ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು.
ಸಂಘದ ನೂತನ ಅಧ್ಯಕ್ಷರಾಗಿ ಪಿ.ಆರ್.ಸುಧಾಕರ್ ಬಿಳಗುಳ, ಉಪಾಧ್ಯಕ್ಷರಾಗಿ ಜಗನ್ ಮೋಹನ್ ಮೂಡಿಗೆರೆ, ಕಾರ್ಯದರ್ಶಿಯಾಗಿ ಕೃಷ್ಣ ಆರ್.ಬಿಳಗುಳ, ಸಹಕಾರ್ಯದರ್ಶಿ ಮೋಹನ್ ಕನ್ನೇಹಳ್ಳಿ, ಖಜಾಂಚಿಯಾಗಿ ಉನ್ನಿಕೃಷ್ಣ ಗಂಗನಮಕ್ಕಿ, ಮಹಿಳಾ ಘಟಕದ ಅಧ್ಯಕ್ಷರಾಗಿ ಸುಮಿತ್ರ ವೇಲಾಯುಧನ್ ಗಂಗನಮಕ್ಕಿ, ಸಂಘಟನಾ ಕಾರ್ಯದರ್ಶಿಗಳಾಗಿ ಓಮನ್ ಸುಬ್ರಮಣಿ ಗಂಗನಮಕ್ಕಿ, ಅಭಿಲಾಷ್ ಕೃಷ್ಣಮೂರ್ತಿ.
ನೂತನ ಪದಾಧಿಕಾರಿಗಳಿಗೆ ಮಾಜಿ ಅಧ್ಯಕ್ಷ ಮಹೇಶ್ ಸಿ.ವಿ. ಮತ್ತು ಸಂಘದ ಸದಸ್ಯರು ಅಭಿನಂದನೆ ಸಲ್ಲಿಸಿದ್ದಾರೆ.



