ಶಿವಮೊಗ್ಗ ಶರಾವತಿ ಹಿನ್ನಿರಿನಾ ಪಂಪ್ ಸ್ಟೋರೇಜ್ ಅಳವಡಿಕೆಯು ಆತುರದ ನಿರ್ಧಾರವಾಗಿದ್ದು, ಇದರಿಂದ ಪರಿಸರ ಸೂಕ್ಷ್ಮತೆ ಮತ್ತು ಕೃಷಿ ಮಾದರಿಗೆ ಅಡ್ಡಿಪಡಿಸುತ್ತದೆ ಎಂದು ಭದ್ರಾ ಪರಿಸರ ಸಂರಕ್ಷಣಾ ಪ್ರತಿಷ್ಠಾನದ ಸಂಸ್ಥಾಪಕ ಮತ್ತು ಬಿಜೆಪಿ ಮುಖಂಡ ಡಾ.ಶಿವು ಪ್ರಸಾದ್ ಎಸ್ ಆರ್ ಅವರಂತೆ ವಿರೋಧ ವ್ಯಕ್ತಪಡಿಸಿದ್ದಾರೆ.
ಚಿಕ್ಕಮಗಳೂರಿನಲ್ಲಿ ಪತ್ರಿಕಾ ಹೇಳಿಕೆ ಪ್ರಕಟಿಸಿದ ಅವರು. ಆಲಮಟ್ಟಿ-, 292, ಸೂಪಾ, 100, ಗೇರುಸೊಪ್ಪಾ, 240, ಟಿ.ಬಿ. ಅಣೆಕಟ್ಟು72 ಮೆವ್ಯಾ ಪ್ರಸ್ತುತ ವಿದ್ಯುತ್ ಉತ್ಪಾದನಾ ಸಾಮರ್ಥ್ಯ ಹೊಂದಿದೆ ಹೀಗಿರುವಾಗ ಇದು ಹಾಸ್ಯಾಸ್ಪದವೆನಿಸುತ್ತದೆ.
ಸರ್ಕಾರವು ಪರ್ಯಾಯ ಇಂಧನ ಉತ್ಪಾದನೆಯನ್ನು ಆಯ್ಕೆ ಮಾಡಿಕೊಳ್ಳಬಹುದು – ಸೌರ, ಪವನ ಮತ್ತು ಉಷ್ಣ ವಿದ್ಯುತ್ ಸ್ಥಾವರಗಳನ್ನು ಪರಿಸರ ವಲಯಗಳ ಹೊರಗೆ ಕೈಗೆತ್ತಿಕೊಳ್ಳಬಹುದು.
ರಾಜ್ಯ ಸರ್ಕಾರಗಳು ಪರಿಹಾರ ಅರಣ್ಯೀಕರಣವು (ಕ್ಯಾಂಪಾ)ರಾಜ್ಯ ಮತ್ತು ರಾಷ್ಟ್ರೀಯ ಮಟ್ಟದಲ್ಲಿ ಸಮತೋಲನವನ್ನು ಹೊಂದಿದೆ ಆದರೆ ಸ್ಥಳೀಯವಾಗಿ ಇದು ಅವೈಜ್ಞಾನಿಕವಾಗಿದೆ ಮತ್ತು ಪ್ರಕೃತಿಯನ್ನು ಅಸಮತೋಲನಗೊಳಿಸುತ್ತದೆ.
ಸರ್ಕಾರವು ನೈಸರ್ಗಿಕ ಸಂಪನ್ಮೂಲಗಳು ಮತ್ತು ರೈತರನ್ನು ಒಂದೇ ಸಂರಕ್ಷಣಾ ಕೋನದಲ್ಲಿ ಇಡಬೇಕು, ಎಂದು ಹೇಳಿದರು.



