ಮೂಡಿಗೆರೆ ತಾಲ್ಲೂಕು, ಕಣಚೂರು ಗ್ರಾಮದ ದಿವಂಗತ ಕೆ ಎಸ್ ಮಂಜೇಗೌಡರ ಪತ್ನಿ, ಹಿರಿಯ ಕಾಫಿ ಬೆಳೆಗಾರರಾಗಿದ್ದ ಶ್ರೀಮತಿ ಬಿ. ಎಂ ಶಕುಂತಲಾ ರವರು (ಕೆ ಎಂ ಪ್ರಕಾಶ್, ಕೆ ಎಂ ಪ್ರದೀಪ್, ಕೆ ಎಂ ಪ್ರಸನ್ನ ಅವರ ತಾಯಿ) ಶುಕ್ರವಾರ ರಾತ್ರಿ 09.00 ಘಂಟೆಗೆ ದೈವಾದೀನರಾಗಿದ್ದಾರೆ ಎಂದು ತಿಳಿಸಲು ವಿಷಾದಿಸುತ್ತೇವೆ.
ಮೃತರ ಅಂತಿಮ ಸಂಸ್ಕಾರವನ್ನು ಇಂದು ಶನಿವಾರ ಸಂಜೆ (ದಿನಾಂಕ 22/11/2025) 04.00 ಘಂಟೆಗೆ ಮೃತರ ಸ್ವಗ್ರಾಮ ಶ್ರೀದೇವಿ ಎಸ್ಟೇಟ್, ಕಣಚೂರು ಇಲ್ಲಿ ನಡೆಸಲಾಗುವುದು ಎಂದು ಕುಟುಂಬ ಮೂಲಗಳು ತಿಳಿಸಿವೆ.
ಮೃತರು ಹಿರಿಯ ಕೃಷಿಕ ಮಹಿಳೆಯಾಗಿದ್ದರು. ಮಕ್ಕಳು ಮೊಮ್ಮಕ್ಕಳು ಅಪಾರ ಬಂಧುಗಳನ್ನು ಅಗಲಿದ್ದಾರೆ. ಬಿ.ಎಂ ಶಕುಂತಲಾ ಅವರ ನಿಧನಕ್ಕೆ ಕರ್ನಾಟಕ ಬೆಳೆಗಾರರ ಒಕ್ಕೂಟ, ಮೂಡಿಗೆರೆ ಬೆಳಗಾರರ ಸಂಘ, ಕೆಂಪೇಗೌಡ ಒಕ್ಕಲಿಗರ ವೇದಿಕೆ, ಸೇರಿದಂತೆ ಹಲವು ಸಂಘ ಸಂಸ್ಥೆಗಳು ತಮ್ಮ ಸಂತಾಪ ವ್ಯಕ್ತಪಡಿಸಿದ್ದಾರೆ.



