ದಿನಾಂಕ 20.12.2025 ರಂದು ತರೀಕೆರೆ ಪಟ್ಟಣದ ಚಿಕ್ಕೇರೆಯಲ್ಲಿ ಮನೆಯ ಮೇಲ್ಭಾಗದ ಶೀಟ್ ನ್ನು ತೆಗೆದು ಒಳಗೆ ನುಗ್ಗಿ ರೂ. 8.90 ಲಕ್ಷ ನಗದು ಮತ್ತು ರೂ. 8.76 ಲಕ್ಷ ಮೌಲ್ಯದ 73.5 ಗ್ರಾಂ ಚಿನ್ನಾಭರಣಗಳನ್ನು ಕಳವು ಮಾಡಿದ್ದ ಪ್ರಕಣದಲ್ಲಿ ಡಿ.ವೈ.ಎಸ್.ಪಿ. ತರೀಕೆರೆ ಉಪವಿಭಾಗ ನೇತೃತ್ವದ ಪೊಲೀಸ್ ತಂಡ ಓರ್ವ ಆರೋಪಿಯನ್ನು 24 ಗಂಟೆಯೊಳಗಾಗಿ ದಸ್ತಗಿರಿ ಮಾಡಿ, ಕಳವು ಮಾಡಿದ್ದ ಸ್ವತ್ತನ್ನು ವಶಪಡಿಸಿಕೊಂಡಿರುತ್ತಾರೆ.
ಡಿವೈಎಸ್ಪಿ ತರೀಕೆರೆ ಉಪವಿಭಾಗ ಪರಶುರಾಮಪ್ಪ ಹೆಚ್ ನೇತೃತ್ವದ ಪೊಲೀಸ್ ತಂಡದಲ್ಲಿ ಪಿಐ ತರೀಕೆರೆ ಪೊಲೀಸ್ ಠಾಣೆ ರಾಮಚಂದ್ರ ನಾಯಕ್, ಪಿಎಸ್ಐ ನಾಗೇಂದ್ರ ನಾಯ್ಕ್, ಮಂಜುನಾಥ್ ಮನ್ನಂಗಿ ಮತ್ತು ದೇವೇಂದ್ರ ರಾಥೋಡ್, ಎಎಸ್ಐ ರವಿ ಹಾಗೂ ಪೊಲೀಸ್ ಸಿಬ್ಬಂದಿಗಳಾದ ಪ್ರಕಾಶ್, ರುದ್ರೇಶ್, ರಿಯಾಜ್, ಧನಂಜಯಸ್ವಾಮಿ, ಮಧು, ಕಾಂತರಾಜು, ರಾಜೇಶ ಮತ್ತು ಶ್ರೀನಿವಾಸ ರವರು ಕಾರ್ಯನಿರ್ವಹಿಸಿರುತ್ತಾರೆ.
ಪ್ರಕರಣ ತನಿಖೆ ಹಂತದಲ್ಲಿರುವುದರಿಂದ ಆರೋಪಿಯ ಮಾಹಿತಿಯನ್ನು ಬಹಿರಂಗಪಡಿಸಿಲ್ಲ.



