ಮೂಡಿಗೆರೆ ತಾಲ್ಲೂಕಿನ ಸರ್ಕಾರಿ ನೌಕರರ ಸಂಘದ ಅಧ್ಯಕ್ಷರಾದ ನವೀನ್ ಬಿ ಆರ್ ಹಾಗೂ ಪತ್ನಿ ಮಿಥನ ನವೀನ್ ರವರು ಕುಟುಂಬದ ವತಿಯಿಂದ ಹಳೆಕೋಟೆ ಅಂಗನವಾಡಿಗೆ ರಿಜಿಸ್ಟರ್ ಗಳು, ವಸ್ತುಗಳನ್ನು ಸಂರಕ್ಷಿಸಲು ಕಬ್ಬಿಣದ ಅಲ್ಮೇರಾವನ್ನು ಕೊಡುಗೆಯಾಗಿ ನೀಡಿದ್ದಾರೆ.
ಈ ಶಿಕ್ಷಕ ದಂಪತಿಯ ಮಕ್ಕಳಾದ ಮನೋತೇಜ್ ಹಾಗೂ ಸೂರ್ಯತೇಜ್ ಕೂಡ ಹಳೆಕೋಟೆ ಅಂಗನವಾಡಿಯ ಹಳೆ ವಿದ್ಯಾರ್ಥಿಗಳಾಗಿದ್ದರು. ಪ್ರಸ್ತುತ ಮನೋತೇಜ್ ನವೋದಯ ಶಾಲೆಯಲ್ಲಿ ಹಾಗೂ ಸೂರ್ಯತೇಜ್ ಮೂಡಿಗೆರೆಯಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದಾರೆ.
ನವೀನ್ ಹಾಗೂ ಮಿಥನ ಶಿಕ್ಷಕರ ಕೊಡುಗೆಯನ್ನು ಸ್ಮರಿಸಿ ಸಿಡಿಪಿಒ ಕಚೇರಿಯ ಅಧಿಕಾರಿ, ಸಿಬ್ಬಂದಿಗಳು,ಹಳೆಕೋಟೆ ಅಂಗನವಾಡಿಯ ಶಿಕ್ಷಕಿ ಭಾಗ್ಯ, ಸಹಾಯಕಿ ಗೀತಾರವರು ಧನ್ಯವಾದ ತಿಳಿಸಿ, ಅಭಿನಂದನೆ ಸಲ್ಲಿಸಿದ್ದಾರೆ.




