ಆಲ್ದೂರು ಪಟ್ಟಣದ ಬಿರಂಜಿ ಹೊಳೆಯ ಸಮೀಪದ ಮಲ್ನಾಡ್ ಟ್ರೋಫಿ ಕ್ರೀಡಾಂಗಣದಲ್ಲಿ ಭಾನುವಾರ ಆಲ್ದೂರು ವಲಯ ಮಟ್ಟದ ಸರ್ಕಾರಿ ನೌಕರರು ಮತ್ತು ಗುತ್ತಿಗೆ ನೌಕರ ಸಿಬ್ಬಂದಿಗಳ ಎರಡನೇ ವರ್ಷದ ಕ್ರಿಕೆಟ್ ಪಂದ್ಯಾವಳಿ ನಡೆಯಿತು.
ಕ್ರೀಡಾಕೂಟದಲ್ಲಿ ಮೆಸ್ಕಾಂ, ಉದ್ಯೋಗಿಗಳು, ಪೊಲೀಸ್, ಪಂಚಾಯಿತಿ ಸಿಬ್ಬಂದಿಗಳು, ಮಾಧ್ಯಮ ಪತ್ರಕರ್ತರು, ಶಿಕ್ಷಕರು, ಅರಣ್ಯ ಇಲಾಖೆ ಸೇರಿ 6 ತಂಡಗಳು ಭಾಗವಹಿಸಿದ್ದು, ಮೆಸ್ಕಾಂ ತಂಡ ಪ್ರಥಮ ಸ್ಥಾನವನ್ನು ಗಳಿಸಿತು, ದ್ವಿತೀಯ ಸ್ಥಾನವನ್ನು ಅರಣ್ಯ ಇಲಾಖೆ ದ್ವಿತೀಯ ಸ್ಥಾನವನ್ನು ಗಳಿಸಿದ್ದು, ಫೈನಲ್ ಪಂದ್ಯದ ಪಂದ್ಯ ಪುರುಷೋತ್ತಮ ಪ್ರಶಸ್ತಿಯನ್ನು ಮೆಸ್ಕಾಂ ಮಂಜುನಾಥ್ ಸರಣಿ ಸರ್ವೋತ್ತಮ ಪ್ರಶಸ್ತಿ ಉಪ ವಲಯ ಅರಣ್ಯ ಅಧಿಕಾರಿ ಸಂದೀಪ್ ಪಡೆದುಕೊಂಡರು.
ಸಮಾರೋಪ ಕಾರ್ಯಕ್ರಮದಲ್ಲಿ ಕಿರಿಯ ಸಹಾಯಕ ಎಂಜಿನಿಯರ್ ಕೃಷ್ಣಮೂರ್ತಿ,ಗುತ್ತಿಗೆದಾರ ಎಯು.ಇಬ್ರಾಹಿಂ, ಹೆಡದಾಳು ಶಾಮಿಯಾನ ಮಾಲಿಕ ಮಧು, ಪತ್ರಕರ್ತ ರಾಜೇಶ್, ಡಿಎಸ್ಎಸ್ ಮುಖಂಡ ಅಶೋಕ ರಾಜರತ್ನಂ, ನಾಗೇಶ್ ದೊಡ್ಡಯ್ಯ,ವ್ಯವಸ್ಥಾಪಕರಾದ ಕೆ ಮೂರ್ತಿ, ಜೋಸೆಫ್ ಎಂ, ನಾಗರಾಜ್ ಎಆರ್, ಕೃಪಾಕ್ಷ ಕೋಟ್ಯಾನ್, ಮಹೇಶ್ ಎಟಿ, ನಿರ್ಣಾಯಕರಾದ ಜೀವನಕ್ಕೆ ಸೂರಿ ಭಾಗವಹಿಸಿದ್ದರು.




