ಮೂಡಿಗೆರೆ ತಾಲೂಕು ಬಾಗೂರು ಹೋಬಳಿ ಹಾದಿಹೊಣಿ ಗ್ರಾಮದ ದಿ.ಹೆಚ್. ಕೆ.ಪುಟ್ಟೇಗೌಡರ ಧರ್ಮಪತ್ನಿಯವರಾದ ಶತಾಯುಷಿ ಶ್ರೀಮತಿ ಹಾಲಮ್ಮ ನವರು (103 ವರ್ಷ) ( ಮಂಜುನಾಥ್ ನಿವೃತ್ತ ಪೊಲೀಸ್ ಎಎಸ್ಐ ಮತ್ತು ರಮೇಶ್ ಅವರ ತಾಯಿ ) ಭಾನುವಾರ ಸಂಜೆ 6.00 ಗಂಟೆಗೆ ವಯೋಸಹಜವಾಗಿ ನಿಧನರಾಗಿದ್ದಾರೆ.
ನೂರು ವರ್ಷಗಳನ್ನು ಪೂರೈಸಿದ ಹಾಲಮ್ಮನವರು ಉತ್ತಮ ಆರೋಗ್ಯ ಕಾಪಾಡಿಕೊಂಡಿದ್ದರು. ತಮ್ಮ ಕೆಲಸವನ್ನು ಸ್ವತಃ ಮಾಡಿಕೊಳ್ಳುತ್ತಿದ್ದರು.

ಕಳೆದ ವರ್ಷ ಮೂಡಿಗೆರೆ ಜೇಸೀಐ ಸಂಸ್ಥೆ ವತಿಯಿಂದ ಅವರು ಮೊಮ್ಮಗ ಕುನ್ನಹಳ್ಳಿ ಪ್ರದೀಪ್ ಅಧ್ರಯಕ್ಷರಾಗಿದ್ದ ಅವಧಿಯಲ್ಲಿ ಹಾಲಮ್ಮನವರನ್ನು ಸನ್ಮಾನಿಸಿ ಗೌರವಿಸಲಾಗಿತ್ತು
ಶ್ರೀಮತಿ ಹಾಲಮ್ಮನವರು 4 ಜನ ಹೆಣ್ಣುಮಕ್ಕಳು 2 ಗಂಡು ಮಕ್ಕಳು ಮತ್ತು 17 ಮೊಮ್ಮಕ್ಕಳು ಹಾಗೂ 20 ಮರಿ ಮೊಮ್ಮಕ್ಕಳನ್ನು ಅಗಲಿದ್ದಾರೆ.
ಶ್ರೀಮತಿ ಹಾಲಮ್ಮನವರ ಅಂತ್ಯಕ್ರಿಯೆ ದಿನಾಂಕ:23:02:2026ನೇ ಸೋಮವಾರ ಮದ್ಯಾಹ್ನ 02-00ಗಂಟೆಗೆ ಸ್ವ ಗ್ರಾಮದಲ್ಲಿ ನೆರವೇರಲಿದೆ ಎಂದು ಕುಟುಂಬ ಮೂಲಗಳು ತಿಳಿಸಿವೆ.



