ಚಿಕ್ಕಮಗಳೂರು ತಾಲ್ಲೂಕಿನ ಹಚ್ಚಡಮನೆ ಶ್ರೀ ಚಾಮುಂಡೇಶ್ವರಿ ದೇವಿ ಕ್ಷೇತ್ರದಲ್ಲಿ ದಿನಾಂಕ 12-03-2026 ಮತ್ತು 13-03-2026 ರಂದು
20 ನೇ ವರ್ಷದ ವರ್ಧಂತ್ಯುತ್ಸವ ಮತ್ತು ಪುನರ್ ಪ್ರತಿಷ್ಠಾಪನಾ ಬ್ರಹ್ಮ ಕಳಸೋತ್ಸವ ಏರ್ಪಡಿಸಲಾಗಿದೆ ಎಂದು ಸಮಿತಿಯ ಪದಾಧಿಕಾರಿಗಳು ತಿಳಿಸಿದ್ದಾರೆ.
ಕಾರ್ಯಕ್ರಮದ ವಿವರ
ಶ್ರೀ ವಿಶ್ವಾವಸು ನಾಮ ಸಂವತ್ಸರದ ಶಿಶಿರ ಋತು ಪಾಲ್ಗುಣ ಬಹುಳ ನವಮಿ ಮತ್ತು ದಶಮಿ ಅಂದರೆ ದಿನಾಂಕ 12-03-2026 ಗುರುವಾರ ಮತ್ತು ದಿನಾಂಕ 13-03-2026, ಶುಕ್ರವಾರದಂದು ಪುನರ್ ಅಷ್ಠಬಂಧ ಕಲಶೋತ್ಸವವನ್ನು ನೆರವೇರಿಸುವುದೆಂದು ನಿರ್ಧರಿಸಲಾಗಿದೆ.ದಿನಾಂಕ 12-03-2026 ಗುರುವಾರ
ಬೆಳಿಗ್ಗೆ 7.00 ರಿಂದ ಪುಣ್ಯಾಹ ವಾಚನ ಗಣಪತಿ ಪೂಜೆ, ಗಣಪತಿ ಹವನ, ನಾಗನಿಗೆ ಪೂಜೆ ಮತ್ತು ಆಶ್ಲೇಷ ಬಲಿ ಸರ್ಪ ಸೂಕ್ತ ಹವನ
ಶ್ರೀ ದೇವಿಗೆ ನಿತ್ಯ ಪೂಜೆ
ಮತ್ತು ಬಿಂಬ ಸಂಕೋಚ
ಮಧ್ಯಾಹ್ನ 12-30ಕ್ಕೆ ಮಂಗಳಾರತಿ,
ಸಾಯಂಕಾಲ 5-00 ರಿಂದ ಕ್ಷೇತ್ರ ರಕ್ಷೆ ಮತ್ತು ಶುದ್ದಿಗಾಗಿ ರಾಕ್ಷೆಘ್ನಹವನ ವಾಸ್ತು ಪೂಜ ಬಲಿ, ಬ್ರಹ್ಮಾದಿ ಪೂಜನ, ಕಲಶ ಪ್ರತಿಷ್ಠಾಪನ ಹವನ,
ರಾತ್ರಿ 9.00ಕ್ಕೆ ಮಂಗಳಾರತಿ
ದಿನಾಂಕ 13-03-2026 ರ ಶುಕ್ರವಾರ
ಬೆಳಿಗ್ಗೆ 5.45 ರಿಂದ 6.30ರ ಶುಭ ಕುಂಭ ಲಗ್ನದಲ್ಲಿ ಪ್ರತಿಷ್ಠಾಪನೆ, ನೆತ್ರೋನ್ ಮಿಲನ , ಪ್ರತಿಷ್ಠಾಪನ ಹವನ ಬೆಳಿಗ್ಗೆ 7.00 ರಿಂದ 8.00 ಗಂಗೆ ಪೂಜೆ
8.15 ರಿಂದ ಶ್ರೀ ದೇವಿಗೆ ಗಂಗಾಭಿಷೇಕ,
ಬೆಳಿಗ್ಗೆ 7.00 ರಿಂದ ಚಂಡಿಕಾ ಯಾಗ ಪ್ರಾರಂಭ. 9.30 ರಿಂದ 10.00 ಶಿಖರಾಭಿಷೇಕ, 10.00 ರಿಂದ ಶ್ರೀ ದೇವಿಗೆ ಬ್ರಹ್ಮ ಕಲಶಾಭಿಷೇಕ, 11.30ಕ್ಕೆ ಚಂಡಿಕಾಯಾಗದ ಪೂರ್ಣಾಹುತಿ.
ಮಧ್ಯಾಹ್ನ 12-10 ಶ್ರೀ ದೇವಿಗೆ ಮಹಾಮಂಗಳಾರತಿ,
ತೀರ್ಥ ಪ್ರಸಾದ ವಿತರಣೆ
ನಂತರ
ಅನ್ನ ಸಂತರ್ಪಣೆ
ಈ ಎಲ್ಲಾ ಕಾರ್ಯಕ್ರಮಗಳಿಗೆ ಭಕ್ತಾದಿಗಳು ಅತೀ ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಶ್ರೀ ಅಮ್ಮನವರ ಕೃಪೆಗೆ ಪಾತ್ರರಾಗಬೇಕಾಗಿ ಕೋರುತ್ತೇವೆ.
ಕ್ಷೇತ್ರದಲ್ಲಿ ಪ್ರತಿದಿನ ಬೆಳಗ್ಗೆ ಮತ್ತು ಸಂಜೆ ಎರಡು ಬಾರಿ ಪೂಜೆ ಇರುತ್ತದೆ. ಈ ಕ್ಷೇತ್ರದಲ್ಲಿ ನಾಗರ ಪಂಚಮಿಯಂದು ನಾಗದೇವರಿಗೆ ವಿಶೇಷ ಪೂಜೆ ಇರುತ್ತದೆ.
ಕ್ಷೆತ್ರದಲ್ಲಿ 13-03-2026 ನೇ ಶುಕ್ರವಾರ ನಡೆಯುವ ಚಂಡಿಕಾ ಯಾಗ ದಲ್ಲಿ ಪಾಲ್ಗೊಂಳ್ಳುವವರು ರೂ 1001/- ನ್ನು ಒಂದು ದಿನದ ಮುಂಚೆಯೇ ಪಾವತಿಸಿ ನೋಂದಾಯಿಸಿಕೊಳ್ಳಬೇಕು
(ಚಂಡಿಕಾ ಯಾಗ ಕ್ಕೆ ನೋಂದಾಯಿಸಿಕೊಳ್ಳುವವರು
ತಮ್ಮ ರಾಶಿ ನಕ್ಷತ್ರ ಕಡ್ಡಾಯವಾಗಿ ನಮೋದಿಸಬೇಕು)
ಶುಭ ಕೋರುವ :
ಶ್ರೀ ಚಾಮುಂಡೇಶ್ವರಿ ದೇವಸ್ಥಾನ ಹಚ್ಚಡಮನೆ ಸರ್ವಸದಸ್ಯರು
ಹಾಗೂ ಹಚ್ಚಡಮನೆ, ವಾಜುವಳ್ಳಿ, ವಾಟಿಗನಹಳ್ಳಿ ಗ್ರಾಮಸ್ಥರುಗಳು
ವಿಳಾಸ :-
ಆಲದಗುಡ್ಡೆ- ಬಸ್ಕಲ್ ರಸ್ತೆ, ಹಚ್ಚಡಮನೆ,
ಚಿಕ್ಕಮಗಳೂರು ತಾಲ್ಲೂಕು
ಮಾಹಿತಿಗಾಗಿ ಸಂಪರ್ಕಿಸಿ
9019513515, 9901463787, 9480659545, 9663051178, 9449460663



