ಮೂಡಿಗೆರೆ ತಾಲ್ಲೂಕು ಬಾಳೂರು ಹೋಬಳಿ ಕೆಂಪೇಗೌಡ ಒಕ್ಕಲಿಗ ವೇದಿಕೆಯ ನೂತನ ಅಧ್ಯಕ್ಷರಾಗಿ ಡಿ.ಟಿ ಉಮೇಶ್ ಮಾವಿನಕೊಡಿಗೆ ಆಯ್ಕೆಯಾಗಿದ್ದಾರೆ.

ಬಾಳೂರಿನಲ್ಲಿ ನಡೆದ ಕೆಂಪೇಗೌಡ ಒಕ್ಕಲಿಗ ವೇದಿಕೆಯ ಸಭೆಯಲ್ಲಿ ಅಧ್ಯಕ್ಷರನ್ನು ಆಯ್ಕೆ ಮಾಡಲಾಯಿತು. ಪ್ರದಾನ ಕಾರ್ಯದರ್ಶಿಯಾಗಿ ಅಂಜನ್ ಬಾಳೂರು ಆಯ್ಕೆಯಾದರು. ಈ ಸಂದರ್ಭದಲ್ಲಿ ನಿಕಟಪೂರ್ವ ಅಧ್ಯಕ್ಷರಾದ ಸೋಮೇಶ್ಗೌಡ ಮರ್ಕಲ್ ಅವರು ಡಿ.ಟಿ ಉಮೇಶ್ ಮಾವಿನಕೊಡಿಗೆ ಅವರಿಗೆ ಧ್ವಜ ನೀಡುವ ಮೂಲಕ ಅಧಿಕಾರ ಹಸ್ತಾಂತರ ಮಾಡಿದರು.
ಕೆಂಪೇಗೌಡ ಒಕ್ಕಲಿಗ ವೇದಿಕೆ ಅಧ್ಯಕ್ಷ ಬ್ರಿಜೇಶ್ ಕಡಿದಾಳು, ಪ್ರದಾನ ಕಾರ್ಯದರ್ಶಿ ಪ್ರಸಾದ್ ಬಕ್ಕಿ, ಒಕ್ಕಲಿಗ ಮುಖಂಡರಾದ ಭರತ್ ಬಿ.ಎಂ, ಕಲ್ಲೇಶ್ ಬಿ.ಎಸ್, ಲಕ್ಷ್ಮಣ್ ಗೌಡ ಬಿ.ಎಸ್, ಬಿ.ಜಿ ಸುರೇಂದ್ರ, ಕೂಡ್ಲಿ ರಾಜೇಂದ್ರ, ಕೆ.ಟಿ ಸತೀಶ್, ಕಲ್ಲೇಶ್ ಗೌಡ ಬಿ.ಆರ್, ಜಗದೀಶ ಗೌಡ ಬಿ.ಆರ್, ಆದರ್ಶ್ ಬಿ.ಎನ್ ಮುಂತಾದವರು ಇದ್ದರು.


