ಕಳಸ ತಾಲೂಕಿನ ಕಗ್ಗನಳ್ಳ ಪಡೀಲು ಶ್ರೀ ಸತ್ಯಸಾರಮಾನಿ ಕ್ಷೇತ್ರದಲ್ಲಿ ವಾರ್ಷಿಕ ದಿಪೋತ್ಸವ ನಡೆಯಿತು. ವಿದ್ಯುದ್ದೀಪ, ತಳಿರು ತೋರಣ ಗಳಿಂದ ಶ್ರೀ ಕ್ಷೇತ್ರವು ಜಾತ್ರೆಯಂತೆ ಕಂಗೊಳಿಸಿತು.
ಗ್ರಾಮದ ಭಕ್ತಾಧಿಗಳು ತಾವು ಬೆಳೆದ ಬೆಳೆಗಳನ್ನು ಹೊರೆಕಾಣಿಕೆಯ ಮೂಲಕ ದೈವಸ್ಥಾನಕ್ಕೆ ಸಮರ್ಪಿಸಿದರು. ಮತ್ತು ಸುತ್ತಮುತ್ತಲಿನ ಗ್ರಾಮಗಳಿಂದ ಆಗಮಿಸಿದ್ದ ಭಕ್ತಾಧಿಗಳು ದೈವಸ್ಥಾನದ ಸುತ್ತ ನೂರಾರು ದೀಪಗಳನ್ನು ಬೆಳಗಿಸಿ ದೈವಗಳ ಕೃಪೆಗೆ ಪಾತ್ರರಾದರು.
ಪ್ರತಿವರ್ಷವೂ ಕ್ಷೇತ್ರದಲ್ಲಿ ವಾರ್ಷಿಕ ದೀಪೋತ್ಸವ ವಿಜೃಂಭಣೆಯಿಂದ ನಡೆಯುತ್ತದೆ. ಗ್ರಾಮಸ್ಥರು ಸಾಂಪ್ರದಾಯಿಕ ಧಾರ್ಮಿಕ ಆಚರಣೆಯನ್ನು ಉಳಿಸಿ ಬೆಳೆಸಿಕೊಂಡು ಬರುತ್ತಿದ್ದಾರೆ.
ಕಾರ್ಯಕ್ರಮದಲ್ಲಿ ಸಾರಾಮಾನಿ ಮತ್ತು ಆದಿದ್ರಾವಿಡ ಸಂಘಟನೆಗಳ ಪದಾಧಿಕಾರಿಗಳು, ಕುಲಬಾಂಧವರು ದೈವಸ್ಥಾನ ಸಮಿತಿಗಳ ಮುಖ್ಯಸ್ಥರುಗಳು, ಭಾಗವಹಿಸಿದ್ದರು. ಕಾರ್ಯಕ್ರಮದ ನಂತರ ಸರ್ವರಿಗೂ ಪ್ರಸಾದ್ ವಿನಿಯೋಗ ಹಾಗೂ ಅನ್ನಸಂತರ್ಪಣೆ ಮಾಡಲಾಗಿತ್ತು.


