ಅಖಿಲ ಭಾರತ ವೀರಶೈವ ಮಹಾಸಭಾದ ಚಿಕ್ಕಮಗಳೂರು ಜಿಲ್ಲಾ ಉಪಾಧ್ಯಕ್ಷರಾಗಿ ಶ್ರೀಮತಿ ಶಾಲಿನಿ ಅನಿಲ್ ಕುಮಾರ್ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಜಿಲ್ಲಾ ಸಮಿತಿಗೆ ಪದಾಧಿಕಾರಿಗಳನ್ನು ಅವಿರೋಧವಾಗಿ ಆಯ್ಕೆ ಮಾಡಲಾಗಿದ್ದು, ಮೂಡಿಗೆರೆ ತಾಲ್ಲೂಕಿನಿಂದ ಶ್ರೀಮತಿ ಶಾಲಿನಿ ಅವರನ್ನು ಜಿಲ್ಲಾ ಸಮಿತಿ ಉಪಾಧ್ಯಕ್ಷರಾಗಿ ಆಯ್ಕೆ ಮಾಡಲಾಗಿದೆ.
ಮಹಾಸಭಾದ ಗೌರವ ಅಧ್ಯಕ್ಷರಾಗಿ ಬಾಳೆಹೊನ್ನೂರು ರಂಬಾಪುರಿ ಮಠದ ಶ್ರೀ ವೀರಸೋಮೇಶ್ವರ ಜಗದ್ಗುರುಗಳು ಮಾರ್ಗದರ್ಶನ ಮಾಡಲಿದ್ದಾರೆ.
ಮಹಾಸಭಾದ ಜಿಲ್ಲಾ ಅಧ್ಯಕ್ಷರಾಗಿ ಹೆಚ್.ಎಂ. ಲೋಕೇಶ್, ಪ್ರಧಾನ ಕಾರ್ಯದರ್ಶಿಯಾಗಿ ಬೇಲನಹಳ್ಳಿ ಸೋಮಶೇಖರ್, ಉಪಾಧ್ಯಕ್ಷರಾಗಿ ಕೆ.ಆರ್. ದ್ರುವಕುಮಾರ್, ರುದ್ರಮುನಿ, ಶ್ರೀಮತಿ ಹೆಚ್. ವಿ. ಶಾಲಿನಿ, ಸಹ ಕಾರ್ಯದರ್ಶಿಗಳಾಗಿ ತೇಜಕುಮಾರ್, ಸಿ.ಎಸ್. ಸಿದ್ದೇಗೌಡ, ಡಿ.ಎಸ್. ರಾಜೇಶ್ವರಿ, ಕೋಶಾಧ್ಯಕ್ಷರಾಗಿ ಹೆಚ್.ಸಿ. ರೇವಣ್ಣಸಿದ್ದಪ್ಪ ಅವರನ್ನು ಅವಿರೋಧವಾಗಿ ಆಯ್ಕೆ ಮಾಡಲಾಗಿದೆ.
ಉಪಾಧ್ಯಕ್ಷರಾಗಿ ಆಯ್ಕೆಯಾಗಿರುವ ಶ್ರೀಮತಿ ಶಾಲಿನಿ ಅನಿಲ್ ಕುಮಾರ್ ಅವರು ಮೂಡಿಗೆರೆ ತಾಲ್ಲೂಕು, ಗೋಣಿಬೀಡು ಹೋಬಳಿ ಹಿರೇಶಿಗರ ಗ್ರಾಮದವರಾಗಿದ್ದು, ವಿವಿಧ ಸಂಘ ಸಂಸ್ಥೆಗಳಲ್ಲಿ ಸಾಮಾಜಿಕ ಕಾರ್ಯಚಟುವಟಿಕೆಗಳಲ್ಲಿ ಸಕ್ರಿಯರಾಗಿ ಗುರುತಿಸಿಕೊಂಡಿದ್ದಾರೆ.
ಅವರು ಈ ಹಿಂದೆ ಚಿಕ್ಕಮಗಳೂರು ಜಿಲ್ಲಾ ವೀರಶೈವ ಮಹಾಸಭಾದ ಮಹಿಳಾ ಘಟಕದ ಉಪಾಧ್ಯಕ್ಷರಾಗಿ ಕಾರ್ಯನಿರ್ವಹಿಸಿದ್ದರು. ಭಾರತ ಸೇವಾದಳದ ಆಜೀವ ಸದಸ್ಯರಾಗಿರುತ್ತಾರೆ. ಸಕಲೇಶಪುರ ಅಕ್ಕಮಹಾದೇವಿ ಮಹಿಳಾ ಸಮಾಜ, ಬೇಲೂರು ತಾಲ್ಲೂಕು ವೀರಶೈವ ಮಹಿಳಾ ಘಟಕದ ಸದಸ್ಯರಾಗಿ, ಸಕಲೇಶಪುರ ವುಮೆನ್ಸ್ ಕಾಫಿ ಪ್ರಡ್ಯೂಷರ್ ಕಂಪನಿ ಸದಸ್ಯರಾಗಿ ತೊಡಗಿಸಿಕೊಂಡಿದ್ದಾರೆ.
ಕೃಷಿಯಲ್ಲಿ ಹೆಚ್ಚಿನ ಆಸಕ್ತಿ ಹೊಂದಿದ್ದು, ಪತಿ ಅನಿಲ್ ಕುಮಾರ್ ಅವರೊಂದಿಗೆ ಕಾಫಿ ತೋಟ ನಿರ್ವಹಣೆಯಲ್ಲಿ ಸಕ್ರಿಯರಾಗಿ ತೊಡಗಿಸಿಕೊಂಡು ಬಂದಿದ್ದಾರೆ, ಅನೇಕ ವರ್ಷಗಳಿಂದ ಅಡಿಕೆ ಸಸಿ ನರ್ಸರಿಯನ್ನು ನಿರ್ವಹಿಸುತ್ತಿದ್ದಾರೆ. ಶುಭ ಸಮಾರಂಭಗಳಲ್ಲಿ ವಿಶೇಷ ದೀಪ ಅಲಂಕಾರ ಮಾಡುತ್ತಾರೆ. ವೈವಿದ್ಯಮಯ ಅಡುಗೆ ತಯಾರಿ ಸ್ಪರ್ಧೆ, ಷಟಲ್ ಮತ್ತು ಬ್ಯಾಡ್ಮೀಂಟನ್ ಸ್ಪರ್ಧೆಗಳಲ್ಲಿ ರಾಜ್ಯಮಟ್ಟದ ವರೆಗೆ ಸ್ಪರ್ಧಿಸಿದ್ದಾರೆ.
ತಮ್ಮನ್ನು ಅಖಿಲ ಭಾರತ ವೀರಶೈವ ಮಹಾಸಭಾದ ಚಿಕ್ಕಮಗಳೂರು ಜಿಲ್ಲಾ ಉಪಾಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಮಾಡಿದ ಎಲ್ಲಾ ಸದಸ್ಯರಿಗೆ, ಪದಾಧಿಕಾರಿಗಳಿಗೆ, ಜಿಲ್ಲಾ ಅಧ್ಯಕ್ಷರಾದ ಹೆಚ್.ಎಂ. ಲೋಕೇಶ್ ಅವರಿಗೆ ಶಾಲಿನಿಯವರು ಧನ್ಯವಾದ ಸಲ್ಲಿಸಿದ್ದಾರೆ.



