ಮೂಡಿಗೆರೆ ಸಾರ್ವಜನಿಕ ಶ್ರೀ ಹಿಂದೂ ಮಹಾಸಭಾ ಗಣಪತಿ ಸೇವಾ ಸಮಿತಿ ಪೂರ್ವಭಾವಿ ಸಭೆ ಇತ್ತೀಚೆಗೆ ನಡೆಯಿತು. ಸಮಿತಿಯ ಅಧ್ಯಕ್ಷರಾದ ಶ್ರೀ ಅನುಕುಮಾರ್ (ಪುಟ್ಟಣ್ಣ) ರವರ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಈ ಬಾರಿ ಗಣಪತಿ ಉತ್ಸವವನ್ನು ಅತ್ಯಂತ ವಿಜೃಂಭಣೆಯಿಂದ ನೆರವೇರಿಸಲು ತೀರ್ಮಾನಿಸಲಾಯಿತು. ಗಣಪತಿ ಉತ್ಸವದ ಬಗ್ಗೆ ವ್ಯಾಪಕ ಪ್ರಚಾರ ನೀಡಲು ಮತ್ತು ವ್ಯವಸ್ಥಿತವಾಗಿ ಸಂಘಟಿಸಲು ಹೋಬಳಿ ಮಟ್ಟದಲ್ಲಿ ಮತ್ತು ಮೂಡಿಗೆರೆ ನಗರದ ವಾರ್ಡ್ ಗಳ ಮಟ್ಟದಲ್ಲಿ ಸಮಿತಿಗಳನ್ನು ರಚಿಸಿ ಜವಾಬ್ದಾರಿ ನೀಡಲು ತೀರ್ಮಾನಿಸಲಾಯಿತು.
ಮೂಡಿಗೆರೆ ನಗರಕ್ಕೆ ಸಂಬಂಧಿಸಿದಂತೆ ಸಮಿತಿಯನ್ನು ರಚಿಸಲಾಗಿದ್ದು, ಹೋಬಳಿ ಮಟ್ಟದಲ್ಲಿ ಪ್ರತ್ಯೇಕ ಸಭೆಗಳನ್ನು ಕರೆದು ಸಮಿತಿ ರಚಿಸಲು ತೀರ್ಮಾನಿಸಲಾಯಿತು.
ಮೂಡಿಗೆರೆ ನಗರ ಸಮಿತಿಗೆ ಈ ಕೆಳಕಂಡಂತೆ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಗಿದೆ.
ಅಧ್ಯಕ್ಷರು: ಸುಧೀರ್.
ಪ್ರಧಾನ ಕಾರ್ಯದರ್ಶಿ: ಸಿದ್ದಯ್ಯ ವಕೀಲರು.
ವಾರ್ಡ್ ಪ್ರಮುಖ್
ವಾರ್ಡ್ 1 :- ಪಾಲಾಕ್ಷ.
ವಾರ್ಡ್ 2 :- ದೀಕ್ಷಿ.
ವಾರ್ಡ್ 3:- ಸಂತೋಷ್.
ವಾರ್ಡ್ 4:- ಷಣ್ಮುಖ ಭಂಡಾರಿ.
ವಾರ್ಡ್ 5 :- ಸುನಿಲ್.
ವಾರ್ಡ್ 6:- ಜಗನ್ ಮೋಹನ್.
ವಾರ್ಡ್ 7 :- ರಮೇಶ್ ಜೈನ್.
ವಾರ್ಡ್ 8 :- ಲೋಕೇಶ್.
ವಾರ್ಡ್ 9 :- ಬಸವರಾಜ್.
ವಾರ್ಡ್ 10 :- ನಾರಾಯಣ್ ರಾಜ್ ಅರಸ್.
ವಾರ್ಡ್ 11 :- ಆಶಿಕ್.
ಸಭೆಯಲ್ಲಿ ಸಮಿತಿಯ ಕಾರ್ಯಾಧ್ಯಕ್ಷರಾದ ಜೆ.ಎಸ್. ರಘು, ಸಮಿತಿಯ ಪ್ರಧಾನ ಕಾರ್ಯದರ್ಶಿಗಳಾದ ಹೆಚ್.ಕೆ. ಭರತ್ ಕನ್ನೇಹಳ್ಳಿ, ಹೆಚ್.ಪಿ. ಮಂಜುನಾಥ್, ಸಮಿತಿಯ ಖಜಾಂಚಿ ಪ್ರವೀಣ್ ಮಗ್ಗಲಮಕ್ಕಿ, ಚಂದ್ರು ಹುಲ್ಲೇಮನೆ, ಪಟ್ಟಣ ಪಂಚಾಯತ್ ಸದಸ್ಯರಾದ ಕೆ ಸುಧೀರ್, ಮನೋಜ್, ಮಾಜಿ ಅಧ್ಯಕ್ಷರಾದ ಡಿ. ಎಸ್. ಸುರೇಂದ್ರ. ಮುಖಂಡರಾದ ಬಿ. ಎನ್. ಜಯಂತ್. ಮಾಜಿ ಯೋಧರ ಸಂಘದ ತಾಲ್ಲೂಕು ಅಧ್ಯಕ್ಷರಾದ ಎಂ.ಕೆ. ಚಂದ್ರೇಶ್. ಮುಖಂಡರಾದ ಲಕ್ಷ್ಮಣ್ ಗೌಡ್ರು, ಬಾಳೆಹಳ್ಳಿ ದಯಾಕರ್. ಸಮಿತಿಯ ಪದಾಧಿಕಾರಿಗಳಾದ ಗಿರೀಶ್ ಹಳ್ಳಿಬೈಲು. ಟಿ ಹರೀಶ್. ಪದ್ಮನಾಭ ಛತ್ರಮೈದಾನ, ರಘು ಟೈಲರ್. ಹೆಚ್ಎನ್ ಪ್ರದೀಪ್. ರಂಗನಾಥ್. ಪುಣ್ಯ ಮೂರ್ತಿ , ಎಂ ಪಿ ಮಹೇಂದ್ರ. ಎಸ್ ಕೃಷ್ಣಪ್ಪ, ಪ್ರವೀಣ್ ಜೈನ್. ರಮೇಶ್ ಜೈನ್. ಸುಶೀಲ, ಪಾಪಕ್ಕ. ಗೀತಾ ಸೇರಿದಂತೆ ನಗರದ ಪ್ರಮುಖರು ಭಾಗವಹಿಸಿದ್ದರು.



