ಚಿಕ್ಕಮಗಳೂರು ನಗರದ ವಕೀಲರು, ಕಲಾವಿದರು, ಹಾಡುಗಾರರಾದ ಸಂಘಟಕ ವಿ.ಕೆ. ರಘು ಅವರ ಗಾಯನ ಕಾರ್ಯಕ್ರಮ ಮತ್ತು ಸ್ಪರ್ಧೆ ಸೆಪ್ಟಂಬರ್ 14 ರಂದು ನಗರದ ಐಜಿ ರಸ್ತೆಯಲ್ಲಿರುವ ವಿಷ್ಣು ಆರ್ಕೇಡ್ ಹೋಟೆಲ್ನಲ್ಲಿ ಏರ್ಪಡಿಸಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.
ಜಿಲ್ಲೆ ಮತ್ತು ರಾಜ್ಯಮಟ್ಟದ ಗಾಯಕರು ಭಾಗವಹಿಸಲಿರುವ ಈ ಕಾರ್ಯಕ್ರಮದಲ್ಲಿ ಆಸಕ್ತ ಗಾಯಕರು ನೊಂದಾಯಿಸಲು 9448004762 ಹಾಗೂ 9986177832 ಸಂಖ್ಯೆಗಳನ್ನು ಸಂಪರ್ಕಿಸಬಹುದಾಗಿದೆ ಎಂದು ಆಯೋಜಕರಾದ ವಿ.ಕೆ. ರಘು ತಿಳಿಸಿದ್ದಾರೆ.
ಮೇಘಮಾಲೆ ಖ್ಯಾತಿಯ ನಾಯಕನಟ ಸುನಾದ್ ರಾಜ್, ನಿರ್ದೇಶಕ ಕೆ.ಎಸ್. ಸುಧಾಕರ್ ಹಾಗೂ ಅಖಿಲ ಭಾರತ ಮಟ್ಟದ ಮಿಸೆಸ್ ಇಂಡಿಯಾ ಫಿನಾಲೆ ಕಿರೀಟ (ಕ್ರೌನ್ ವಿನ್ನರ್) ಖ್ಯಾತಿಯ ಪ್ರತಿಭಾ ಸಾಲಿಯಾನ್ ಭಾಗವಹಿಸಲಿದ್ದಾರೆ.
ಈ ಕಾರ್ಯಕ್ರಮ ನಗರದ ಭೂಮಿಕ ಟಿವಿಯಲ್ಲಿ ಅಂದು ನೇರಪ್ರಸಾರವಾಗಲಿದ್ದು, ಜಿಲ್ಲೆಯ 6 ಜನ ಉತ್ತಮ ಗಾಯಕರಿಗೆ ಪ್ರಶಸ್ತಿ ನೀಡಿ ಗೌರವಿಸಲಾಗುವುದೆಂದು ಅವರು ತಿಳಿಸಿದ್ದಾರೆ.


