ಮೂಡಿಗೆರೆ ತಾಲ್ಲೂಕು ಅರೆಕೂಡಿಗೆಯ ಕಾಫಿ ಬೆಳೆಗಾರರು, ಮೈಸೂರು ಜೆಕೆ ಟಯರ್ಸ್ ನಿವೃತ್ತ ಡೆಪ್ಯೂಟಿ ಮೇನೇಜರ್ ಎ.ಎ. ಮಂಜುನಾಥ (ಜಾತ)ರವರ ಧರ್ಮಪತ್ನಿ ಶ್ರೀಮತಿ ದಾತ್ರಿಯವರು (49 ವರ್ಷ) ಮಂಗಳವಾರ ರಾತ್ರಿ 9.30 ಗಂಟೆಗೆ ಬೆಂಗಳೂರಿನಲ್ಲಿ ನಿಧನರಾಗಿರುತ್ತಾರೆ. (ಕೊಮಾರ್ಕ್ ಅಧ್ಯಕ್ಷರಾದ ಅರೆಕೂಡಿಗೆ ಶಿವಣ್ಣ ನವರ ತಮ್ಮನ ಪತ್ನಿ).
ದಾತ್ರಿ ಅವರು ಕೆಲ ಸಮಯದಿಂದ ಅನಾರೋಗ್ಯದಿಂದ ಬಳಲುತ್ತಿದ್ದರು, ಚಿಕಿತ್ಸೆ ಫಲಕಾರಿಯಾಗದೇ ಕೊನೆಯುಸಿರೆಳೆದಿದ್ದಾರೆ. ಮೃತರು ಪತಿ, ಇಬ್ಬರು ಪುತ್ರಿಯರು ಹಾಗೂ ಅಪಾರ ಬಂಧುಗಳನ್ನು ಅಗಲಿದ್ದಾರೆ.
ಮೃತರ ಅಂತ್ಯಕ್ರಿಯೇ ಇಂದು ಬುಧವಾರ ಮಧ್ಯಾಹ್ನ 3.00 ಗಂಟೆಗೆ ಮೂಡಿಗೆರೆ ಹೆಸಗಲ್, ಚಿಕ್ಕಳ್ಳ ರಸ್ತೆ, ಮೂಡಿಗೆರೆ ಇವರ ಎಸ್ಟೇಟ್ ನಲ್ಲಿ ಜರುಗಲಿದೆ.
ದಾತ್ರಿ ಅವರ ಆತ್ಮಕ್ಕೆ ಚಿರಶಾಂತಿಯನ್ನು ಕೋರುತ್ತಾ, ಇವರ ಕುಟುಂಬದವರಿಗೆ ದುಃಖವನ್ನು ಸಹಿಸುವ ಶಕ್ತಿಯನ್ನು ದೇವರು ಕರುಣಿಸಲಿ ಎಂದು ಹೆಚ್.ಬಿ.ಶಿವಣ್ಣ ಅಧ್ಯಕ್ಷರು / ಟಿ .ಪಿ.ಸುರೇಂದ್ರ ಪ್ರಧಾನ ಕಾರ್ಯದರ್ಶಿ / ಪದಾಧಿಕಾರಿಗಳು /ನಿರ್ದೇಶಕರು ಹಾಗೂ ಮಾಜಿ ಅಧ್ಯಕ್ಷರುಗಳು , ಕರ್ನಾಟಕ ಬೆಳೆಗಾರರ ಒಕ್ಕೂಟ.
ಬಿ .ಆರ್ ಬಾಲಕೃಷ್ಣ ಅಧ್ಯಕ್ಷರು ಮೂಡಿಗೆರೆ ತಾಲ್ಲೂಕು ಬೆಳೆಗಾರರ ಸಂಘ , ಹಾಗು ಬಿ ಎಸ್ ಜೈರಾಂ ಮಾಜಿ ಅಧ್ಯಕ್ಷರು ,ಕೆ ಜಿ ಎಫ್ , ಕೆ .ಡಿ .ಮನೋಹರ್ ಕಾರ್ಯದರ್ಶಿ ಮೂಡಿಗೆರೆ ತಾಲ್ಲೂಕು ಬೆಳೆಗಾರರ ಸಂಘ ,ಹಾಗು ಬಿ.ಬಸವರಾಜು , ಹೆಚ್ .ಪಿ .ರೇವಣ್ಣ ಗೌಡ , ಹೆಚ್ .ಪಿ .ದೇವರಾಜು ,ಡಿ ಎಸ್ .ರಘು ಹಾಗು ಮೂಡಿಗೆರೆ ತಾಲ್ಲೂಕು ಬೆಳೆಗಾರರ ಸಂಘದ ಕಾರ್ಯಕಾರಿ ಮಂಡಳಿ
ಅರೆಕೂಡಿಗೆ ಶಿವಣ್ಣ, ಅಧ್ಯಕ್ಷರು ಕೊಮಾರ್ಕ್ ಮತ್ತು ಉಪಾಧ್ಯಕ್ಷರು , ಹಾಗೂ ,ನಿರ್ದೇಶಕರುಗಳು,
ಕೊಮಾರ್ಕ್ ಹಾಸನ ಸೇರಿದಂತೆ ಹಲವು ಗಣ್ಯರು ತಮ್ಮ ಸಂತಾಪ ವ್ಯಕ್ತಪಡಿಸಿದ್ದಾರೆ.



