ಆಲ್ದೂರು ಪಟ್ಟಣದ ಸರ್ಕಾರಿ ಪ್ರೌಢಶಾಲೆಯ ವಿದ್ಯಾರ್ಥಿಗಳಿಗೆ ಡೈಮಂಡ್ ಕ್ರಿಕೆಟ್ ಪ್ರೀಮಿಯರ್ ಲೀಗ್ ವ್ಯವಸ್ಥಾಪಕರಿಂದ
30 ಸಾವಿರ ಮೌಲ್ಯದ ಕ್ರೀಡಾ ಸಾಮಗ್ರಿಯನ್ನು ವಿತರಿಸಲಾಯಿತು.
ವ್ಯವಸ್ಥಾಪಕ ಕೃಪಾಕ್ಷ ಕೋಟ್ಯಾನ್ ಪ್ರಾಸ್ತಾವಿಕವಾಗಿ ಮಾತನಾಡಿ ; ಜನವರಿ ತಿಂಗಳಿನಲ್ಲಿ ಕ್ರಿಕೆಟ್ ಕ್ರೀಡಾಕೂಟವನ್ನು ಆಯೋಜಿಸಿದ್ದು,ಮೊದಲೇ ಯೋಜನೆ ರೂಪಿಸಿದಂತೆ 30 ಸರ್ಕಾರಿ ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ಕೈ ಹಾಗೂ ಕಾಲುಗಳಿಗೆ ಉಪಯೋಗಿಸುವ ನೀ ಕ್ಯಾಪ್ಸ್ ಗಳನ್ನು ತಲಾ ಎರಡು ಜೊತೆಯಂತೆ 120 ಒದಗಿಸಿದ್ದೇವೆ ಎಂದು ತಿಳಿಸಿದರು.
ಎಸ್ ಡಿ ಎಂ ಸಿ ಅಧ್ಯಕ್ಷ ಎ ಯು ಇಬ್ರಾಹಿಂ ಸರ್ಕಾರಿ ಶಾಲೆಯ ಮಕ್ಕಳ ಕ್ರೀಡಾ ಪ್ರತಿಭೆಯನ್ನು ಉತ್ತೇಜಿಸಲು ಸಹಕಾರ ನೀಡಿದ್ದಕ್ಕಾಗಿ ಕೃತಜ್ಞತೆಗಳನ್ನು ಸಲ್ಲಿಸುವುದಾಗಿ ತಿಳಿಸಿದರು.
ಕಾರ್ಯಕ್ರಮದಲ್ಲಿ ಕೆ.ಮೂರ್ತಿ, ಪತ್ರಕರ್ತ ಜೋಸೆಫ್ .ಎಂ. ಮುಖ್ಯ ಶಿಕ್ಷಕ ಸುರೇಶ್ ಸಿಎಸ್,ಸಹ ಶಿಕ್ಷಕರಾದ ಸಿಎಂ ಜ್ಯೋತಿ, ನಯನಕುಮಾರಿ, ಸತ್ಯನಾರಾಯಣ,ಮಹೇಂದ್ರ, ಹಿರೇಮಠ,ದೇವಮ್ಮ, ದ್ವಿತೀಯ ದರ್ಜೆ ಸಹಾಯಕ ಮಂಜುನಾಥ್ ಆರ್. ಟಿ. ಉಪಸ್ಥಿತರಿದ್ದರು.



