sringeri

 

 

ಶೃಂಗೇರಿ ವಿಧಾನಸಭಾ ಕ್ಷೇತ್ರದ ಅಂಚೆ ಮತಎಣಿಕೆಯ ಫಲಿತಾಂಶಕ್ಕೆ ಬಿಗ್ ಟ್ವಸ್ಟ್ ಸಿಕ್ಕಿದೆ. ಮತ ಎಣಿಕೆಯ ನಂತರ ಶಾಸಕ ಟಿ.ಡಿ.ರಾಜೇಗೌಡ ಅವರು ಶಾಸಕ ಸ್ಥಾನ ಕಳೆದುಕೊಳ್ಳುವ ಭೀತಿ ಎದುರಿಸುತ್ತಿದ್ದಾರೆ. ಹೈಕೋರ್ಟ್ ನಿರ್ದೇಶನ ಮೇರೆಗೆ ಅಂಚೆ ಮತಗಳ ಮರುಎಣಿಕೆ ಕಾರ್ಯ ನಿನ್ನೆ ಶನಿವಾರ ಚಿಕ್ಕಮಗಳೂರು ನಗರದ ಐ ಡಿ ಎಸ್ ಜಿ ಕಾಲೇಜಿನಲ್ಲಿ ನಡೆಸಲಾಯಿತು.

ಬೆಳಗ್ಗೆಯಿಂದಲೇ ಎಣಿಕೆ ಕಾರ್ಯದಲ್ಲಿ ಹೈಡ್ರಾಮಾ ನಡೆದಿತ್ತು. ಮಧ್ಯಾಹ್ನದ ಹೊತ್ತಿಗೆ ಟಿ.ಡಿ. ರಾಜೇಗೌಡರೇ ಹೆಚ್ಚುವರಿ ಎರಡು ಮತಗಳ ಅಂತರದಲ್ಲಿ ಗೆಲುವು ಪಡೆದಿದ್ದಾರೆ ಎಂದು ಅನಧಿಕೃತವಾಗಿ ಘೋಷಣೆಯೂ ಆಗಿತ್ತು. ಇದರಿಂದ ಕಾಂಗ್ರೇಸ್ ಕಾರ್ಯಕರ್ತರು ಮತ್ತು ಸ್ವತಃ ಶಾಸಕ ಟಿ.ಡಿ. ರಾಜೇಗೌಡ ಅವರು ಸಂಭ್ರಮಾಚರಣೆ ಮಾಡಿದ್ದರು. ಇದು ರಾಜ್ಯದ ಮಾಧ್ಯಮಗಳಲ್ಲಿಯೂ ಪ್ರಸಾರವಾಯಿತು.

ಆದರೆ ಇದೀಗ ಫಲಿತಾಂಶಕ್ಕೆ ರಾತ್ರೋರಾತ್ರಿ ಬಿಗ್ ಟ್ವಿಸ್ಟ್ ಸಿಕ್ಕಿದೆ. ಎಣಿಕೆ ನಡೆಸಿದ ಅಧಿಕಾರಿಗಳು ನೀಡಿರುವ ಲೆಕ್ಕಾಚಾರದ ಪ್ರಕಾರ ಕಾಂಗ್ರೇಸ್ ಶಾಸಕ ಟಿ.ಡಿ. ರಾಜೇಗೌಡರಿಗೆ ತೀವ್ರ ಹಿನ್ನಡೆಯಾಗಿದ್ದು, ಶಾಸಕ ಸ್ಥಾನ ಕಳೆದುಕೊಳ್ಳುವ ಭೀತಿ ಎದುರಾಗಿದೆ.

ಟಿ.ಡಿ. ರಾಜೇಗೌಡರು 250 ಅಂಚೆ ಮತಗಳನ್ನು ಕಳೆದುಕೊಂಡಿದ್ದಾರೆ. ಈ ಮೂಲಕ ಸೋಲಿನ ಸುಳಿಯಲ್ಲಿ ಸಿಲುಕಿದ್ದಾರೆ. ಲೆಕ್ಕಾಚಾರದ ಪ್ರಕಾರ ಡಿ.ಎನ್. ಜೀವರಾಜ್ ಅವರು ಗೆಲುವು ಪಡೆದಿದ್ದಾರೆ. ಚುನಾವಣೆ ಅಧಿಕಾರಿಗಳು ಮರುಎಣಿಕೆ ಮಾಹಿತಿಯನ್ನು ಹೈಕೋರ್ಟ್ ಗೆ ಸಲ್ಲಿಸಲಿದ್ದು, ಇದೀಗ ಶೃಂಗೇರಿ ಕ್ಷೇತ್ರದ ಫಲಿತಾಂಶ ನ್ಯಾಯಾಲಯದ ಅಂಗಳಕ್ಕೆ ತಲುಪಿದ್ದು, ನ್ಯಾಯಾಲಯದ ಆದೇಶದ ಮೇಲೆ ಭವಿಷ್ಯ ನಿರ್ಧಾರವಾಗಲಿದೆ.

ಅಧಿಕಾರಿಗಳು ನೀಡಿರುವ ಮಾಹಿತಿ ಏನು ?

ತಡರಾತ್ರಿವರೆಗೂ ನಡೆದ ಎಣಿಕೆ ಕಾರ್ಯದಲ್ಲಿ ಎಣಿಕೆ ಕೇಂದ್ರದಿಂದ ಹೊರಬಂದ ಅಧಿಕಾರಿಗಳು ಮಾಧ್ಯಮಗಳಿಗೆ ನೀಡಿದ ಮಾಹಿತಿಯಂತೆ

2023 ರಲ್ಲಿ ಆದಂತಹ ಅಂಚೆ ಮತಗಳ ಎಣಿಕೆಯಲ್ಲಿ 692 ಮತಗಳು ಡಿ.ಎನ್.ಜೀವರಾಜ್ ಅವರಿಗೆ ಮತ್ತು 569 ಮತಗಳು ಟಿ.ಡಿ.ರಾಜೇಗೌಡರಿಗೆ ಬಂದಿದ್ದವು. ಆದರೆ ಇದೀಗ ಹೈಕೋರ್ಟ್ ನ ಆದೇಶದಂತೆ ನಡೆದ ಅಂಚೆ ಮತಗಳ ಮರುಎಣಿಕೆಯಲ್ಲಿ ಡಿ.ಎನ್. ಜೀವರಾಜ್ ಅವರಿಗೆ 690 ಮತಗಳು ಮತ್ತು ಟಿ.ಡಿ. ರಾಜೇಗೌಡರಿಗೆ 314 ಮತಗಳು ದೊರಕಿವೆ. ಅಂದರೆ ಜೀವರಾಜ್ ಅವರಿಗೆ 2 ಮತಗಳು ಕಡಿಮೆಯಾಗಿದ್ದರೆ, ಟಿ.ಡಿ. ರಾಜೇಗೌಡರಿಗೆ ಬರೋಬ್ಬರಿ 255 ಮತಗಳು ಕಡಿಮೆಯಾಗಿವೆ. ಇದು ಫಲಿತಾಂಶವನ್ನು ವ್ಯತ್ಯಾಸ ಮಾಡಲಿದೆ.

ಏಕೆಂದರೆ 2023 ರಲ್ಲಿ ಟಿ.ಡಿ. ರಾಜೇಗೌಡರು ಕೇವಲ 201 ಮತಗಳ ಅಂತರದಿಂದ ಗೆಲುವು ಪಡೆದಿದ್ದರು. ಈಗಿನ ಲೆಕ್ಕಾಚಾರದ ಪ್ರಕಾರ 52 ಮತಗಳ ಅಂತರದಿಂದ ಜೀವರಾಜ್ ಗೆಲುವು ಪಡೆದಿದ್ದಾರೆ.

2023 ರಲ್ಲಿ ವ್ಯಾಲಿಡ್ ಆಗಿದ್ದ ಮತಗಳು ಮರುಎಣಿಕೆ ಸಂದರ್ಭದಲ್ಲಿ ದೊಡ್ಡ ಪ್ರಮಾಣದಲ್ಲಿ ತಿರಸ್ಕೃತವಾಗಿದೆ. ಇದು ತೀವ್ರ ಚರ್ಚೆಗೆ ಗ್ರಾಸವಾಗಿದೆ.

ಮುಂದೇನು ?

ಚುನಾವಣಾ ಅಧಿಕಾರಿಗಳು ಇದೀಗ ಮರುಎಣಿಕೆಯ ಮಾಹಿತಿಯನ್ನು ಚುನಾವಣಾ ಆಯೋಗಕ್ಕೆ ಮತ್ತು ಹೈಕೋರ್ಟ್ ಗೆ ಮಾಹಿತಿಯನ್ನು ಸಲ್ಲಿಸಲಿದ್ದಾರೆ. ನ್ಯಾಯಾಲಯದ ಮುಂದಿನ ತೀರ್ಪಿನ ಮೇಲೆ ಶೃಂಗೇರಿ ಕ್ಷೇತ್ರದ ಭವಿಷ್ಯ ನಿರ್ಧಾರವಾಗಲಿದೆ.

ಗೆಲುವಿನ ಸಂಭ್ರಮಾಚರಣೆ ಮಾಡಿದ್ದ ಶಾಸಕ ಟಿ.ಡಿ.ರಾಜೇಗೌಡರು ಮತ್ತು ಕಾಂಗ್ರೇಸ್ ಕಾರ್ಯಕರ್ತರಿಗೆ ಈ ಬೆಳವಣಿಗೆ ಶಾಕ್ ನೀಡಿದ್ದು, ಇದೀಗ ಶೃಂಗೇರಿ ಕ್ಷೇತ್ರದ ಶಾಸಕ ಸ್ಥಾನ ಡೋಲಾಯಮಾನವಾಗಿದೆ.

ಮರುಎಣಿಕೆಯ ಅಂತಿಮ ಫಲಿತಾಂಶದ ನಂತರ ಬಿಜೆಪಿ ಕಾರ್ಯಕರ್ತರು ಸಂಭ್ರಮಾಚರಣೆ ಮಾಡಿದ್ದು, ಈ ಫಲಿತಾಂಶ ಶೃಂಗೇರಿ ಕ್ಷೇತ್ರದಾದ್ಯಂತ ಹೊಸ ಸಂಚಲನ ಮೂಡಿಸಿದೆ.

ನ್ಯಾಯಾಲಯದಲ್ಲಿ ಹೋರಾಟ ಮಾಡಿದ್ದ ಡಿ.ಎನ್.ಜೀವರಾಜ್ ಅವರಿಗೆ ನೈತಿಕವಾಗಿ ದೊಡ್ಡ ಗೆಲುವಾಗಿದ್ದು, ಶೃಂಗೇರಿ ಕ್ಷೇತ್ರದ ಶಾಸಕರಾಗಿ ಮರುಆಯ್ಕೆಯಾಗುವ ಕನಸು ಚಿಗುರಿದೆ.

Leave a Reply

Your email address will not be published. Required fields are marked *

ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ