ಮಹಾರಾಷ್ಟ್ರದ ನಾಗ್ಪುರದಲ್ಲಿ ಜೂನ್ 10 ಮತ್ತು 11 ರಂದು ನಡೆದ ಎಚ್.ಸಿ.ಎಲ್ ಪೌಂಡೇಶನ್ 8ನೇ ಆವೃತ್ತಿಯ ದಕ್ಷಿಣ ವಲಯದ ರಾಷ್ಟ್ರೀಯ 15 ವರ್ಷ ವಯೋಮಾನದ ಬಾಲಕರ ಕಬ್ಬಡಿ ತಂಡದಲ್ಲಿ ಜಾವಳಿ ಗ್ರಾಮದ ಆಟೋ ಚಾಲಕ ಸತೀಶ್ ಮತ್ತು ಮೇರಿ ದಂಪತಿಯ ಪುತ್ರ ಸಮರ್ಥ್ ಸ್ಥಾನ ಪಡೆದು ಪ್ರಥಮ ಸ್ಥಾನ ಪಡೆದಿದ್ದಾರೆ.
ಜುಲೈ 17 ಮತ್ತು 18 ರಂದು ಲಕ್ನೋದಲ್ಲಿ ನಡೆಯಲಿರುವ ಆಲ್ ಇಂಡಿಯಾ ನ್ಯಾಷನಲ್ ಪಂದ್ಯದಲ್ಲಿ ಸಮರ್ಥ್ ಆಡಲಿದ್ದಾರೆ. ಡಿವೈಇಎಸ್ ಕರ್ನಾಟಕ ಕಬಡ್ಡಿ ಕೋಚ್ ಸುನಿಲ್ ಆನೇಕಲ್, ಸಮರ್ಥ್ ಅವರ ಕೋಚ್ ಆಗಿದ್ದರು.
ಬಾಲಕಿಯರ ವಿಭಾಗದಲ್ಲಿ ದ್ವಿತೀಯ ಸ್ಥಾನ: ಬಾಲಕಿಯರ ಕರ್ನಾಟಕ ಕಬಡ್ಡಿ ತಂಡದಲ್ಲಿ ಮೂಡಿಗೆರೆ ತಾಲೂಕಿನ ಬೆಳಗೋಡು ಗ್ರಾಮದ ದಿವಂಗತ ಹರೀಶ್ ಮತ್ತು ಪ್ರೇಮರವರ ಪುತ್ರಿ ಅಂಕಿತಾ, ಹಾಗೂ ಭಾಸ್ಕರ ಪವಿತ್ರರವರ ಪುತ್ರಿ ಸಿಂಚನ ದ್ವಿತೀಯ ಸ್ಥಾನ ಪಡೆದುಕೊಂಡಿದ್ದಾರೆ



