ಮೂಡಿಗೆರೆ ಪಟ್ಟಣದ ಎಂ ಇ ಎಸ್ ಶಾಲೆಯ 15 ಮಕ್ಕಳು ಭಾರತ್ ಸ್ಕೌಟ್ಸ್ ಗೈಡ್ಸ್ ರಾಜ್ಯ ಸಂಸ್ಥೆ ವತಿಯಿಂದ ನೆಡೆಸುವ ಚತ್ರುಥ ಚರಣ್ ಪರೀಕ್ಷೆಯಲ್ಲಿ ಉತಿರ್ಣರಾಗಿದ್ದಾರೆ ಹಾಗೂ 10 ವಿದ್ಯಾರ್ಥಿಗಳು ಪ್ರತಿಷ್ಠಿತ ಗೋಲ್ಡನ್ ಅರೋ ಪರೀಕ್ಷೆಗೆ ಅರ್ಹತೆ ಪಡೆದಿದ್ದಾರೆ.
ಮೂಡಿಗೆರೆ ಸ್ಥಳೀಯ ಸಂಸ್ಥೆ ವತಿಯಿಂದ ಮಕ್ಕಳಿಗೆ ಪ್ರಶಸ್ತಿ ಪ್ರಧಾನ ಮಾಡಿದರು ಮತ್ತು ಸಮಾರಂಭವನ್ನು ಎಂ ಇ ಎಸ್ ಶಾಲೆಯಲ್ಲಿ ಏರ್ಪಡಿಸಿದ್ದರು.
ಈ ಕಾರ್ಯ ಕ್ರಮದಲ್ಲಿ ಮೂಡಿಗೆರೆ ಸ್ಥಳೀಯ ಸಂಸ್ಥೆಯ ಸಹ ಕಾರ್ಯದರ್ಶಿ ರಕ್ಷಿತ್ ಬಾಳೂರು ಕಾರ್ಯಕ್ರಮದಲ್ಲಿ ಭಾಗವಹಿಸಿ ವಿದ್ಯಾರ್ಥಿಗಳಿಗೆ ಪ್ರಶಸ್ತಿ ಪ್ರಧಾನ ಮಾಡಿದರು ಮತ್ತು ಈ ಶಾಲೆಯ ವಿದ್ಯಾರ್ಥಿಯಾದ ಮಾಯಾಂಕ್ ರಾಜ್ಯಪಾಲರಿಂದ ಪ್ರಶಸ್ತಿ ಸ್ವೀಕರಿಸಿ ತಾಲೂಕ್ಕಿಗೆ ಹೆಮ್ಮೆ ತಂದಿದ್ದಾನೆ ಎಂದು ಹೇಳಿದರು ಕಾರ್ಯಕ್ರಮದಲ್ಲಿ ಶಾಲಾ ಮುಖ್ಯ ಶಿಕ್ಷಕಿ ಶ್ರೀಮತಿ ಚಿಂತು ಡಿ ಆರ್ ಮತ್ತು ಶಾಲಾ ಕಬ್ ಮಾಸ್ಟರ್ ಮಣಿಕಂಠ ಮತ್ತು ಕಬ್ಸ್ ವಿದ್ಯಾರ್ಥಿಗಳು ಹಾಜರಿದ್ದರು



