ಮೂಡಿಗೆರೆ ತಾಲ್ಲೂಕು ಬಣಕಲ್ ಜನಸ್ನೇಹಿ ಸೌಹಾರ್ದ ಸಹಕಾರಿ ಸಂಘ ನಿಯಮಿತ 2024-25ನೇ ಸಾಲಿನ 3 ನೇ ವರ್ಷದ ವಾರ್ಷಿಕ ಮಹಾ ಸಭೆ ಬಣಕಲ್ ಗ್ರಾಮ ಪಂಚಾಯಿತಿ ಸಭಾಂಗಣದಲ್ಲಿ ನಡೆಯಿತು.
ಸಂಘದ ಅಧ್ಯಕ್ಷರಾದ ಅಶ್ವಿನ್ ಕುಮಾರ್ ಬಿ ಕೆ ಮಾತನಾಡಿ, ಸಂಘವು ನಡೆದು ಬಂದ ಹಾದಿ ಮತ್ತು ಸಂಘದ ಸದಸ್ಯರನ್ನು ಅರ್ಥಿಕವಾಗಿ ಸಬಲೀಕರಿಸುವುದು ನಮ್ಮ ಸಂಘಧ ಮೂಲ ಉದ್ದೇಶ. ಜನಸಾಮಾನ್ಯರಿಗಾಗಿ ಸನ್ನಿಧಿ ಖಾತೆಯೆಂಬ ಹೊಸ ಠೇವಣಿ ಖಾತೆಯನ್ನು ಬಿಡುಗಡೆ ಮಾಡಲಾಗಿದ್ದು ಅದರ ಲಾಭವನ್ನು ಪಡೆಯಬೇಕಿದೆ ಎಂದರು.
ಮುಖ್ಯ ಕಾರ್ಯನಿರ್ವಾಹಕಿ ಶ್ರೀಮತಿ ಶ್ವೇತ ಎ ಎನ್ ಮಾತನಾಡಿ, ಸಂಘವು 2,63,456,640 ರೂಪಾಯಿಗಳಷ್ಟು ವಹಿವಾಟು ನಡೆಸಿದ್ದು ಒಟ್ಟು 5,96,103 ರೂಪಾಯಿ ಅದಾಯವನ್ನು ಸಂಘ ಗಳಿಸಿದೆ. ಮತ್ತು 1,15,813 ರೂ ನಿವ್ವಳ ಲಾಭ ಗಳಿಸಿದೆ ಎಂದರು.
ಸದಸ್ಯರಾದ ರಮೇಶ್ ಬಿ ಮತ್ತು ದಿನೇಶ್ ಎನ್ ಟಿ, ಪ್ರದೀಪ್, ಸುನೀಲ್, ಸುರೇಶ್ ಶೆಟ್ಟಿ, ಕೃಷ್ಣೆ ಗೌಡ ಬಿ ಟಿ, ನೀಲಕಂಠ ಎ ಎ, ವಿಕ್ಟರ್ ರೋಡ್ರಿಗಸ್, ದೀಕ್ಷಿರ್ ಪಟೇಲ್, ನಿರ್ದೇಶಕರಾದ ಶಶಾಂಕ್ ಎನ್ ಎಸ್, ಕವಿತ ಬಿ, ಮಹೇಂದ್ರ ಬಿ ಎಂ, ಪ್ರಿಯಾಂಕ ಬಿ ಅರ್ ಮತ್ತು ಸಿಬ್ಬಂದಿ ವರ್ಗದವರಾದ ರಶ್ಮಿ,ದಿವ್ಯ,ಅನಿಶ,ದಿಶಾ ಇದ್ದರು.



